ಶಿಕ್ಷಣ ಸಂಸ್ಥೆಗೆ NIA ದಾಳಿ ವಿದ್ಯಾರ್ಥಿ ವಶಕ್ಕೆ

0

ಮಂಗಳೂರು :ಮಂಗಳೂರಿನ ನಾಗುರಿಯಲ್ಲಿ ಇತ್ತೀಚೆಗೆ ಸಂಬಂಧಿಸಿದ ಕುಕ್ಕರ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಸಿದಂತೆ ಬೆಂಗಳೂರಿನಿಂದ ಬಂದ ಎನ್‌ ಐ ಎ ತಂಡ ಮಂಗಳೂರು ಹೊರ ವಲಯದ ಶಿಕ್ಷಣ ಸಂಸ್ಥೆಯೊಂದಕ್ಕೆ ದಾಳಿ ನಡೆಸಿದೆ.

ಬೆಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಪ್ರಕರಣದ ಪ್ರಮುಖ ಆರೋಪಿ ಶಾರೀಕ್‌ ವಿಚಾರಣೆ ನಡೆಸಿದ ಅಧಕಾರಿಗಳು ಶಿಕ್ಷಣ ಸಂಸ್ಥೆಗೆ ದಾಳಿ ನಡೆಸಿದ್ದಾರೆ. ಈಗಾಗಲೇ ಬಂಧಿತನಾಗಿರುವ ಮಾಜ್‌ ಮುನೀರ್‌ ಎಂಬಾತ ಇದೇ ಶಿಕ್ಷಣ ಸಂಸ್ಥೆಯಿಂದ ಇಂಜಿನಿಯರಿಂಗ್‌ ಪದವಿ ಪಡೆದಿದ್ದ.ಬೆಂಗಳೂರಿನಿಂದ ಬಂದಿಳಿದ ಎನ್‌ ಐ ಎ ಯ ಏಳು ಸದಸ್ಯರ ತಂಡ ಕಾಲೇಜಿನಲ್ಲಿ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿ ಉಡುಪಿ ಮೂಲದ ರಿಯಾನ್‌ ಎಂಬ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.

LEAVE A REPLY

Please enter your comment!
Please enter your name here