ನೇರೆಂಕಿಗುತ್ತು ದೈವಗಳ ನೇಮೋತ್ಸವ, ಜಾತ್ರೋತ್ಸವ ಸಂಪನ್ನ

0

ರಾಮಕುಂಜ: ಕಡಬ ತಾಲೂಕಿನ ಹಳೆನೇರೆಂಕಿ ಗ್ರಾಮದ ನೇರೆಂಕಿಗುತ್ತು ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ನಡೆದ ಶ್ರೀ ದೇವಗಳ ನೇಮೋತ್ಸವ, ಶ್ರೀ ಬ್ರಹ್ಮಬೈದರ್ಕಳ ಜಾತ್ರೋತ್ಸವವು ಜ.೭ರಂದು ಮುಂಜಾನೆ ಸಂಪನ್ನಗೊಂಡಿತು.



ಜ.೫ರಂದು ಬೆಳಿಗ್ಗೆ ವೈದಿಕ ಕಾರ್ಯಕ್ರಮ, ಹೊರೆಕಾಣಿಕೆ ಸಂಜೆ ಶ್ರೀ ಚಕ್ರವರ್ತಿ ಕೊಡಮಣಿತ್ತಾಯ, ಪರಿವಾರ ದೈವಗಳು ಮತ್ತು ಶ್ರೀ ಬ್ರಹ್ಮಬೈದರ್ಕಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯಿತು. ರಾತ್ರಿ ಕಲ್ಲುರ್ಟಿ ದೈವದ ನೇಮ, ಅನ್ನಸಂತರ್ಪಣೆ ನಡೆಯಿತು. ಬಳಿಕ ದೈಯೊಂಕ್ಲು, ಮೈಸಂದಾಯ ನೇಮ, ಧೂಮಾವತಿ, ಭಾವನ ದೈವದ ನೇಮ ನಡೆಯಿತು. ಜ.೬ರಂದು ಬೆಳಿಗ್ಗೆ ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವದ ನೇಮ, ಮಧ್ಯಾಹ್ನ ಬಟ್ಟಲು ಕಾಣಿಕೆ, ಕೈಕಾಣಿಕೆ, ಹರಕೆ ಸಮರ್ಪಣೆ, ಅನ್ನಸಂತರ್ಪಣೆ ನಡೆಯಿತು.

ರಾತ್ರಿ ಧರ್ಮಜಾಗೃತಿ ಸಭೆ, ಶ್ರೀ ಬ್ರಹ್ಮಬೈದರ್ಕಳ ಗರಡಿ ಇಳಿಯುವುದು, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಬೈದೇರುಗಳು ಮೀಸೆ ಧರಿಸುವುದು, ಕೋಟಿ ಚೆನ್ನಯ ದರ್ಶನ ಪಾತ್ರಿಗಳ ಸೇಟ್, ಬೈದೇರುಗಳ ಸೇಟ್, ಕಂಚಿಕಲ್ಲಿಗೆ ಕಾಯಿ ಹೊಡೆಯುವ ಕಾರ್ಯಕ್ರಮದೊಂದಿಗೆ ನೇಮೋತ್ಸವ ಸಂಪನ್ನಗೊಂಡಿತು. ದೈವಸ್ಥಾನದ ಆಡಳಿತ ಮೊಕ್ತೇಸರರಾದ ಪುತ್ತೂರು ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದ, ರೇಖಾ ಆನಂದ, ಅಕ್ಷಯ್ ಎಸ್.ಕೆ., ಅರ್ಜುನ್ ಎಸ್.ಕೆ., ಆಕಾಶ್ ಎಸ್.ಕೆ., ಧಾರ್ಮಿಕ ಮಾರ್ಗದರ್ಶಕರಾದ ಎ.ಮಾಧವ ಆಚಾರ್ಯ ಇಜ್ಜಾವು, ಸಮಿತಿ ಅಧ್ಯಕ್ಷರಾದ ನಾರಾಯಣ ಭಟ್ ಟಿ.ರಾಮಕುಂಜ, ಸಂಚಾಲಕ ಕೃಷ್ಣಮೂರ್ತಿ ಇ ಕಲ್ಲೇರಿ, ಉಪಾಧ್ಯಕ್ಷ ಪ್ರಸನ್ನ ನಿಸರ್ಗ, ಕಾರ್ಯದರ್ಶಿ ಕಿರಣ್ ಪಾದೆ, ಜೊತೆ ಕಾರ್ಯದರ್ಶಿ ಶ್ಯಾಮ್ ಪ್ರಸಾದ್ ಕಾಯಾರ, ಸದಸ್ಯರಾದ ಎಂ.ಹರಿನಾರಾಯಣ ಆಚಾರ್ ಎರಟಾಡಿ, ಶೇಖರ ಕಟ್ಟಪುಣಿ, ಡಾ.ಜಿನಚಂದ್ರ ಕಾರ್ಕಳ, ಬಿ.ಸಂಜೀವ ಪೂಜಾರಿ ಬಟ್ಲಡ್ಕ, ಮಹಾಬಲ ರೈ ರಾಮಜಾಲು ಸೇರಿದಂತೆ ವಿವಿಧ ಸಮಿತಿಗಳ ಸದಸ್ಯರು, ಗ್ರಾಮಸ್ಥರು, ಪರವೂರಿನ ಭಕ್ತಾದಿಗಳು ನೇಮೋತ್ಸವದಲ್ಲಿ ಪಾಲ್ಗೊಂಡಿದ್ದರು. 

LEAVE A REPLY

Please enter your comment!
Please enter your name here