ಸಂತೋಷ್ ರೈ ನಳೀಲುರವರಿಂದ ಪದ್ಮನಾಭ ಶೇರಿಗಾರ ರವರ ನಾಗಸ್ವರ ಪರಿಕರಕ್ಕೆ ಬೆಳ್ಳಿಯ ಕವಚ ಕೊಡುಗೆ

0

ಪುತ್ತೂರು: ನಾಗಸ್ವರ, ಸ್ಯಾಕ್ಸೋಪೋನ್ ಕಲಾವಿದ ಅರಿಯಡ್ಕ ದಿ.ಡೊಂಬಯ್ಯ ಶೇರಿಗಾರ ರವರ ಪುತ್ರರಾದ ಪದ್ಮನಾಭ ಶೇರಿಗಾರ ಅರಿಯಡ್ಕ ಇವರು ನುಡಿಸುವ ನಾಗಸ್ವರ ಕ್ಕೆ ನೂತನವಾದ ಬೆಳ್ಳಿಯ ಕವಚವನ್ನು ನಳೀಲು ಶ್ರೀ ಸುಬ್ರಹ್ಮಣ್ಯೇಶ್ವರ ಕ್ಷೇತ್ರದ ಮೊಕ್ತೇಸರ ಸಂತೋಷ್ ಕುಮಾರ್ ರೈ‌ ನಳೀಲು ಉಡುಗೊರೆಯಾಗಿ ಇತ್ತೀಚೆಗೆ ನೀಡಿದರು.

‘ದೈವಾರಾಧನೆ‌ ಕ್ಷೇತ್ರದಲ್ಲಿ ಅನಾದಿಕಾಲದಿಂದಲೂ ವಾದ್ಯ ನುಡಿಸುತ್ತಾ ಬರುತ್ತಿರುವ ಪದ್ಮನಾಭ ಶೇರಿಗಾರ ಇವರಿಗೆ ದೈವ ದೇವರ ಆಶೀರ್ವಾದ ಸದಾ ಇರಲಿ ಎಂದು ಶುಭ ಹಾರೈಸಿದರು. ಈ ವೇಳೆ ಅವರ ಪುತ್ರ ನಾಗಸ್ವರ ಕಲಾವಿದ ಸಂದೀಪ್ ಅರಿಯಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here