ಶಾಂತಾ ಕುಂಟಿನಿಗೆ ಕಾಶಿಯಲ್ಲಿ ಸಾಧನ ಶ್ರೀ ಪ್ರಶಸ್ತಿ ಪ್ರದಾನ

0

ಪುತ್ತೂರು: ಕಾಶಿಯಲ್ಲಿ ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆದ ವಾರಣಾಸಿ ಕಾಶಿ ಜಂಗಮವಾಡಿ ಮಠದ ಕನ್ನಡದ ಕಂಪು ಸರಣಿ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುತ್ತೂರಿನ ಸಾಹಿತಿ, ಸಂಘಟಕಿ ಶಾಂತಾ ಕುಂಟಿನಿಯವರಿಗೆ ಸಾಧನಶ್ರೀ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮೃದ್ಧಿ ಫೌಂಡೇಶನ್ ಕೆಂಗೇರಿ ಕೊಮ್ಮಘಟ್ಟ ಬೆಂಗಳೂರು ಹಾಗೂ ಕಥಾ ಬಿಂದು ಕನ್ನಡ ಕಂಪು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮಂಗಳೂರು ಮತ್ತು ಶ್ರೀ ಮರುಳ ಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್ ಭದ್ರಾವತಿ ಕರ್ನಾಟಕ ಇವರ ಆಯೋಜನೆಯಲ್ಲಿ ಕಾರ್ಯಕ್ರಮ ನಡೆಯಿತು.
ರುದ್ರಾರಾಧ್ಯ, ಸಿದ್ಧಲಿಂಗಯ್ಯ, ರವೀಂದ್ರಕಿಣಿ,ಎಂ.ಎಸ್ ಸುಧಾಮಣಿ, ವೆಂಕಟೇಶ್, ನಾಗರಾಜ್, ಡಾ.ಪರಮೇಶ್ವರಪ್ಪ ಎಸ್. ಬ್ಯಾಡಗಿ, ಡಾ. ಬಸವ ಪ್ರಭು ಜಿರಲಿ, ಪಿ.ವಿ. ಪ್ರದೀಪ್ ಕುಮಾರ್, ನಳಿನಿ ಗಂಗಾಧರ ಚಿಲುಮೆ, ಶಿವಾನಂದ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here