ಉಪ್ಪಿನಂಗಡಿಗೆ ಸುದ್ದಿ ಬಿಡುಗಡೆಯಿಂದ ವರದಿಗಾರರ ಹೊಸ ತಂಡ ನೇಮಕ

0

ಪುತ್ತೂರು: ಕಳೆದ 35 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಿರುವ,ಜಗತ್ತಿನೆಲ್ಲೆಡೆ ಅಸಂಖ್ಯಾತ ಓದುಗರನ್ನು ಹೊಂದಿರುವ ಪುತ್ತೂರಿನ ನಂಬರ್ ವನ್ ದಿನಪತ್ರಿಕೆ ‘ಸುದ್ದಿ ಬಿಡುಗಡೆ’ ಇದೀಗ ಉಪ್ಪಿನಂಗಡಿ ಭಾಗಕ್ಕೆ ವರದಿಗಾರರ ಹೊಸ ತಂಡವೊಂದನ್ನು ನಿಯೋಜಿಸಿದೆ. ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ದೀಪಕ್ ಉಪ್ಪಿನಂಗಡಿಯ ಮುಖ್ಯವರದಿಗಾರರಾಗಿದ್ದು ಜೊತೆಗೆ ವಾರದ ಪ್ರತ್ಯೇಕ ದಿನಗಳಲ್ಲಿ ಹಿರಿಯ ವರದಿಗಾರ ಶೇಖ್ ಜೈನುದ್ದೀನ್ ಮತ್ತು ವರದಿಗಾರ ಸಿದ್ಧೀಕ್ ಕುಂಬ್ರ ಅವರನ್ನೂ ಉಪ್ಪಿನಂಗಡಿಯಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜಿಸಲಾಗಿದೆ. ಲೋಕಯ್ಯ ಸಂಪ್ಯಾಡಿ ಅವರು ಉಪ್ಪಿನಂಗಡಿ ಕಚೇರಿ ವ್ಯವಸ್ಥಾಪಕರಾಗಿರುತ್ತಾರೆ. ಮುಂದಿನ ದಿನಗಳಲ್ಲಿ ಸುದ್ದಿಗೆ ಸಂಬಂಧಿಸಿ ಯಾವುದೇ ವರದಿಗಳು, ಜಾಹೀರಾತು ಮತ್ತು ಇತರ ಮಾಹಿತಿಗಳನ್ನು ಇವರಲ್ಲಿ ನೀಡಲು, ಪಡೆದುಕೊಳ್ಳಲು ಕೋರಲಾಗಿದೆ.

ಸಿದ್ದೀಕ್ ನೀರಾಜೆಯವರಿಗೆ ಸುದ್ದಿಯಿಂದ ಬಿಡುಗಡೆ

ಕಳೆದ ಹಲವು ವರ್ಷಗಳಿಂದ ಸುದ್ದಿ ಬಿಡುಗಡೆ ಗೌರವ ವರದಿಗಾರರಾಗಿ ಉಪ್ಪಿನಂಗಡಿ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿದ್ದೀಕ್ ನೀರಾಜೆಯವರು ಬಲಾತ್ಕಾರದ ಬಂದ್, ಸಾಮಾಜಿಕ ಜಾಲತಾಣಗಳ ದುರುಪಯೋಗ, ಲಂಚ-ಭ್ರಷ್ಟಾಚಾರದ ವಿರುದ್ಧದ ಆಂದೋಲನ ಸೇರಿದಂತೆ ಸುದ್ದಿಯ ಜನೋಪಯೋಗಿ ಆಂದೋಲನಗಳ ವಿರೋಧಿಗಳನ್ನು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿರುವುದು ಇತ್ತೀಚೆಗೆ ನಮ್ಮ ತಿಳುವಳಿಕೆಗೆ ಬಂದಿರುವುದರಿಂದ ಅವರನ್ನು ಸುದ್ದಿ ಬಿಡುಗಡೆಯಿಂದ ಬಿಡುಗಡೆಗೊಳಿಸಲಾಗಿದೆ. ಅವರ ಮುಂದಿನ ಜೀವನಕ್ಕೆ ಶುಭಹಾರೈಸುತ್ತಾ, ಸಾರ್ವಜನಿಕರು ಸುದ್ದಿ ಬಿಡುಗಡೆಗೆ ಸಂಬಂಧಿಸಿ ವರದಿ, ಜಾಹೀರಾತು ಮತ್ತು ಇತರ ಯಾವುದೇ ವಿಷಯಗಳಿಗೆ ಅವರ ಬದಲು ನೂತನ ತಂಡದವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.

LEAVE A REPLY

Please enter your comment!
Please enter your name here