ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ವಿವೇಕಾನಂದ ಜಯಂತಿ- ಸ್ಪರ್ಧಾ ವಿಜೇತರಿಗೆ ಬಹುಮಾನ

0

ವಿವೇಕಾನಂದ ಜಯಂತಿಯ ಪ್ರಯುಕ್ತ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದಿರುತ್ತಾರೆ. ವಿವರಗಳು ಈ ಕೆಳಗಿನಂತಿದೆ:

ದೇಶಭಕ್ತಿಗೀತೆಯ  ಪ್ರಾಥಮಿಕ ವಿಭಾಗದಲ್ಲಿ ಆವನಿ.ಎಸ್.ವಿ.- ಪ್ರಥಮ ಸ್ಥಾನ ಪಡೆದರೆ ಸುಪ್ರಜಾ ರಾವ್-ದ್ವಿತೀಯ ಸ್ಥಾನ ಪಡೆದಿದ್ದಾರೆ  ಪ್ರೌಢ ವಿಭಾಗದಲ್ಲಿ ಸಾನ್ವಿ ಕಜೆ.- ಪ್ರಥಮ ಸ್ಥಾನ ಗಳಿಸಿದ್ದಾರೆ.

ಚಿತ್ರಕಲೆಯ ಪ್ರಾಥಮಿಕ ವಿಭಾಗದಲ್ಲಿ ನಿಲಿಷ್ಕಾ ಕಲ್ಪನೆ ಪ್ರಥಮ ಸ್ಥಾನ ಪಡೆದಿದ್ದು ಪ್ರೌಢ ವಿಭಾಗದಲ್ಲಿ ಕೀರ್ತನ್- ಪ್ರಥಮ ಸ್ಥಾನ ಪಡೆದಿದ್ದಾರೆ.

ಭಾಷಣ ಸ್ಪರ್ಧೆಯ ಪ್ರಾಥಮಿಕ ವಿಭಾಗದಲ್ಲಿ ತನ್ವಿ ಪಟೇಲ್- ಪ್ರಥಮ ಸ್ಥಾನ ಪಡೆದಿದ್ದು ಪ್ರೌಢ ವಿಭಾಗದಲ್ಲಿ ವೈಷ್ಣವಿ ಪೈ – ದ್ವಿತೀಯ ಸ್ಥಾನಿಯಾಗಿದ್ದಾರೆ.

ರಸಪ್ರಶ್ನೆಯ ಪ್ರಾಥಮಿಕ ವಿಭಾಗದಲ್ಲಿ ಅಪೇಕ್ಷಾ.ಎನ್, ಶ್ರೇಯಾ.ವಿ.ರೈ- ಪ್ರಥಮ ಸ್ಥಾನ, ಪ್ರೌಢ ವಿಭಾಗದಲ್ಲಿ ಹಿಮಾನಿ, ನಿನಾದ್.ಜಿ.ರೈ – ಪ್ರಥಮ ಸ್ಥಾನ ಹಾಗೂ ಶಿಕ್ಷಕರಿಗಾಗಿ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢ ಶಾಲಾ ವಿಭಾಗದಲ್ಲಿ ಶ್ರೀಮತಿ ಆಶಾ.ಕೆ – ಪ್ರಥಮ ಹಾಗೂ ಶ್ರೀಮತಿ ಪ್ರೇಮ ಶಂಕರ್ ದ್ವಿತೀಯ ಸ್ಥಾನಗಳನ್ನು ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here