ಬಿಜೆಪಿ ನಗರಮಂಡಲದಿಂದ ವಿಜಯ ಸಂಕಲ್ಪ ಅಭಿಯಾನ

0

ಪುತ್ತೂರು: ಬಿಜೆಪಿ ಪುತ್ತೂರು ನಗರ ಮಂಡಲ ವತಿಯಿಂದ ವಿಜಯ ಸಂಕಲ್ಪ ಅಭಿಯಾನ ಜ.27ರಂದು ಕಲ್ಲಿಮಾರ್‌ನಲ್ಲಿ ನಡೆಯಿತು.

117 ಬೂತ್ ನ ಅಧ್ಯಕ್ಷ ಶಿವಕುಮಾರವರ ಮನೆಯಲ್ಲಿ ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಭಾಗ ಸಹಪ್ರಭಾರಿ ಗೋಪಾಲ ಕೃಷ್ಣ ಹೇರಳೆಯವರು ಮಾರ್ಗದರ್ಶನ ನೀಡಿದರು. ನಗರಸಭೆ ಅಧ್ಯಕ್ಷ ಕೆ. ಜೀವಂಧರ್ ಜೈನ್ , ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಜಿಲ್ಲಾ ಸಮಿತಿ ಸದಸ್ಯರಾದ ರಾಜೇಶ್ ಬನ್ನೂರು, ಚಂದ್ರಶೇಖರ್ ರಾವ್ ಬಪ್ಪಳಿಗೆ, ರಾಮದಾಸ್ ಹಾರಾಡಿ, ಗೌರಿ ಬನ್ನೂರು, ನಗರ ಸಭಾ ಸದಸ್ಯರಾದ ಶಿವರಾಮ್ ಸಪಲ್ಯ, ಶಶಿಕಲಾ ಸಿ. ಎಸ್, ಪಕ್ಷದ ಪ್ರಮುಖರಾದ ವಿನಯ ಭಂಡಾರಿ, ಇಂದು ಶೇಖರ್, ಲೋಕೇಶ್ ಹೆಗ್ಡೆ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಶರಾವತಿ ರವಿನಾರಾಯಣ್, ವೀಣಾ ಆಚಾರ್ಯ, ಜಗದೀಶ್ ಜೋಗಿ, ವಿಸ್ತಾರಕ್ ರಾಕೇಶ, ವೀಕ್ಷಿತ್ ಕಲ್ಲಿಮಾರ್, ಸುಕುಮಾರ, ನಾಗೇಶ್ ಪ್ರಭು, ಜ್ಞಾನೇಶ್, ಸುರೇಶ್ಚಂದ್ರ, ದರ್ಬೆ ಬೂತ್‌ನ ಶ್ರೀದೇವಿ ಭಂಡಾರ್ಕರ್, ದೀಕ್ಷಿತ್, ಸುರೇಶ್ ಕಲ್ಲಿಮಾರ್, ಜತ್ತಪ್ಪ ರೈ ರಾಕೇಶ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here