ಕೆಯ್ಯೂರು: ಜಾನುವಾರುಗಳ ಸಾಮೂಹಿಕ ಜಂತುಹುಳುಗಳ ನಿವಾರಣಾ ಕಾರ್ಯಕ್ರಮ

0

ಪುತ್ತೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಮತ್ತು ಒಕ್ಕೂಟ ವ್ಯಾಪ್ತಿಗೆ ಬರುವ ಎಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಸದಸ್ಯರುಗಳಿಗೆ ರಿಯಾಯಿತಿ ದರದಲ್ಲಿ ಜಾನುವಾರುಗಳ ಸಾಮೂಹಿಕ ಜಂತು ಹುಳುಗಳ ನಿವಾರಣಾ ಕಾರ್ಯಕ್ರಮ ಎ.೦7 ರಂದು ಕೆಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘ ಮಾಡಾವು ಇಲ್ಲಿ ನಡೆಯಿತು. ಒಕ್ಕೂಟದ ರಿಯಾಯಿತಿ ದರದಲ್ಲಿ ಜಂತು ಹುಳುಗಳ ಮಾತ್ರೆಯನ್ನು ಸಂಘದಿಂದ ಎಲ್ಲಾ ಸದಸ್ಯರುಗಳಿಗೆ ವಿತರಿಸಲಾಯಿತು.


ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ರಾಮಣ್ಣ ಗೌಡ, ಪದ್ಮನಾಭ ಪಿ.ಎಸ್, ಮಹಾಲಿಂಗ ಪಾಟಾಳಿ, ಈಶ್ವರಿ ರೈ, ಶಿವಪ್ಪ ನಾಯ್ಕ, ಸಂಘದ ಮಾಜಿ ಕಾರ್ಯದರ್ಶಿ, ಕೃತಕ ಗರ್ಭಧಾರಣಾ ಕಾರ್ಯಕರ್ತ ಚಂದ್ರಹಾಸ ರೈ ಬೊಳಿಕ್ಕಳಮಠ, ಕಾರ್ಯದರ್ಶಿ ಭಾಸ್ಕರ ರೈ ಬೊಳಿಕ್ಕಳಮಠ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here