ಬೆಂಗಳೂರಿನಲ್ಲಿ ಕೋವಿಡ್ ವಾರಿಯರ್ ನೌಕರರ ರಾಜ್ಯ ಮಟ್ಟದ ಚಳುವಳಿ- ಪುತ್ತೂರಿನಿಂದ ತೆರಳಿದ 22  ಮಂದಿ ಕೋವಿಡ್ ವಾರಿಯರ‍್ಸ್

0

ಪುತ್ತೂರು: ಇಲಾಖೆಯಲ್ಲಿರುವ ಖಾಲೀ ಇರುವ ಹುದ್ದೆಗಳಿಗೆ ನೇಮಿಸಿ ಕೆಲಸ ಮುಂದುವರಿಸುವ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ಸಂಯುಕ್ತ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಂಘದಿಂದ ಕೋವಿಡ್ ವಾರಿಯರ‍್ಸ್ ನೌಕರರು ಎ.8ರಂದು ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಪುತ್ತೂರಿನಿಂದ 22ಮಂದಿ ಕೋವಿಡ್ ವಾರಿಯರ‍್ಸ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕರೋನಾ ವಾರಿಯರ್‌ಗಳಾಗಿ ಕೆಲಸ ಮಾಡಿರುವ ನಮ್ಮನ್ನು ಇಲಾಖೆಯ ಖಾಲಿ ಇರುವ ಹುದ್ದೆಗಳಿಗೆ ನೇಮಿಸಿ, ಮುಂದುವರೆಸುವ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದ್ದು, ಪುತ್ತೂರು ಸರಕಾರಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ವಾರಿಯರ್‌ಗಳಾಗಿ ಕೆಲಸ ನಿರ್ವಹಿಸುತ್ತಿದ್ದ ಸುಮಾರು 22 ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

LEAVE A REPLY

Please enter your comment!
Please enter your name here