ತಾಲೂಕು ದಂತ ವೈದ್ಯಕೀಯ ಸಂಘದಿಂದ ಅಗಲಿದ ಡಾ.ನಾರಾಯಣ್ ಭಟ್ ರವರಿಗೆ ಶ್ರದ್ಧಾಂಜಲಿ

0

ಪುತ್ತೂರು: ಭಾರತೀಯ ದಂತ ವೈದ್ಯಕೀಯ ಸಂಘ ಇದರ ಪುತ್ತೂರು ಶಾಖೆ ಹಾಗೂ ಭಾರತೀಯ ದಂತ ವೈದ್ಯಕೀಯ ಸಂಘ ಜಂಟಿಯಾಗಿ ಇತ್ತೀಚೆಗೆ ಅಗಲಿದ ಹಿರಿಯ ದಂತ ವೈದ್ಯ ಡಾ.ಕೆ ನಾರಾಯಣ ಭಟ್ ರವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಭೆಯು ಶ್ರೀ ಸಾಯಿ ಡೆಂಟಲ್ ಕ್ಲಿನಿಕ್ ನಲ್ಲಿ ಏ.07 ರಂದು ಜರಗಿತು.

ಅಗಲಿದ ಡಾ.ನಾರಾಯಣರವರು ಹಲವಾರು ದಶಕಗಳ ಕಾಲ ವೈದ್ಯಕೀಯ ಸೇವೆ ಸಲ್ಲಿಸಿರುತ್ತಾರೆ ಅಲ್ಕದೆ ಭಾರತೀಯ ದಂತ ವೈದ್ಯಕೀಯ ಸಂಘದ ಅಧ್ಯಕ್ಷರಾಗಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿರುತ್ತಾರೆ.ಈ ಸಂದರ್ಭದಲ್ಲಿ ಭಾರತೀಯ ದಂತ ವೈದ್ಯಕೀಯ ಸಂಘದ ಅಧ್ಯಕ್ಷೆ ಡಾ.ಅಮೃತಾ ಕೆ.ಪ್ರಸಾದ್, ಕಾರ್ಯದರ್ಶಿ ಡಾ.ಶಿವಾನಂದ, ಕೋಶಾಧಿಕಾರಿ ಡಾ.ಚರಣ್ ಕಜೆ, ವೈದ್ಯರುಗಳಾದ ಡಾ.ಎಲ್.ಕೆ ಪ್ರಸಾದ್, ಡಾ.ಶನನ್ ಮಸ್ಕರೇನ್ಹಸ್, ಡಾ.ಶ್ರೀಪ್ರಕಾಶ್ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here