ರಾಮಕುಂಜ ಪೆರ್ಜಿಯಲ್ಲಿ ಹೊರೆಕಾಣಿಕೆ ಸಮರ್ಪಣೆ

0

ಆಲಂಕಾರು : ರಾಮಕುಂಜ ಗ್ರಾಮದ ಪೆರ್ಜಿ ಪಾಂಗಣ್ಣಾಯ ಮನೆತನದ ಕುಲದೇವರಾದ ಶ್ರೀ ವೆಂಕಟರಮಣ ದೇವರ ಹಾಗು ಪರಿವಾರ ದೈವಗಳಾದ ಶ್ರೀ ರಕ್ತೇಶ್ವರಿ ಮತ್ತು ವರ್ಣರ ಪಂಜುರ್ಲಿ ಹಾಗು ಯಜ್ಞ ವಾರಹಿ ದೇವಿಯ ಪ್ರತಿಷ್ಠಾ ಮಹೋತ್ಸವ ಎ.8 ರಂದು ಹಾಗು ಎ.9 ರಂದು ನಡೆಯಲಿದೆ.

                                       
ಎ.8 ರಂದು ಬೆಳಿಗ್ಗೆ ಪೆರ್ಜಿ ನಾಗಬನದಲ್ಲಿ ಹಾಗು ಬಟ್ಟೋಡಿ ನಾಗಬನದಲ್ಲಿ ನಾಗತಂಬಿಲ, ಹೊರೆಕಾಣಿಕೆ ಋತ್ವಿಜರಿಗೆ ಸ್ವಾಗತ ಆಲಯ ಪರಿಗ್ರಹ,ಸ್ವಸ್ತಿ ಪುಣ್ಯಾಹ ವಾಚನ,ರಕ್ಷೋಘ್ನ ಹೋಮ, ವಾಸ್ತುಹೋಮ,ಭೂವಾರಹ ಹೋಮ,ವಾಸ್ತುಹೋಮ, ವಾಸ್ತುಬಲಿ,ಬಿಂಬಶುದ್ದಿ,ಪ್ರಸಾದ ವಿತರಣೆ ನಡೆಯಿತು. ಇಂದು ಎ.9 ಶನಿವಾರ ಬೆಳಿಗ್ಗೆ ಸ್ವಸ್ತಿ ಪುಣ್ಯಹ ವಾಚನ, ಗಣಹೋಮ, ಪಂಚವಿಂಶತಿಕಲಶ ಆರಾಧನೆ, ದುರ್ಗಾಹೋಮ, ವಿಷ್ಣುಗಾಯತ್ರಿ ಹೋಮ,ಪುರುಷ ಸೂಕ್ತಹೋಮ, ಶ್ರೀ ಲಕ್ಷೀ೬ ವೆಂಕಟರಮಣ ದೇವರ ಪ್ರತಿಷ್ಠೆ,,ಶಿಖರ ಪ್ರತಿಷ್ಠೆ ,ರಕ್ತೇಶ್ವರಿ,ವರ್ಣರ ಪಂಜುರ್ಲಿ ,ಯಜ್ಞವಾರಹಿ ಪ್ರತಿಷ್ಠೆ, ಬ್ರಹ್ಮಕಲಾಶಾಭಿಷೇಕ, ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ.

ನೂತನ ಗುಡಿಯಲ್ಲಿ ಜರಗುವ ಪ್ರತಿಷ್ಠಾ ಕಾರ್ಯವು ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ಉಪಾಧ್ಯಾಯ ಕಲ್ಪಡ ಮತ್ತು ವೇದಮೂರ್ತಿ ಶ್ರೀ ನರಹರಿ ಉಪಾಧ್ಯಾಯ ಇರ್ಕಿ ಮಠ ಇವರ ನೇತೃತ್ವದಲ್ಲಿ ನಡೆಯಲಿದೆ. ಹೊರೆಕಾಣಿಕೆ ಸಂಧರ್ಭದಲ್ಲಿ ಶ್ರೀಮತಿ ಮತ್ತು ಶ್ರೀ ವೆಂಕಟರಮಣ ಪಾಂಗಣ್ಣಾಯ ಪೆರ್ಜಿ ಮತ್ತು ಸಹೋದರರು ಹಾಗು ಕುಟುಂಬಸ್ಥರು, ಹಾಗು ಶ್ರೀಮತಿ ಮತ್ತು ಶ್ರೀ ಮೋನಪ್ಪ ಗೌಡ ಪೆರ್ಜಿ ಮತ್ತು ಸಹೋದರರು ಹಾಗು ಕುಟುಂಬಸ್ಥರು,ಪ್ರಮುಖರಾದ ಸುಬ್ರಹ್ಮಣ್ಯ ಪಾಂಗಣ್ಣಯ,ಗುರುಪ್ರಸಾದ್ ರಾಮಕುಂಜ,ಹರಿಪ್ರಸಾದ ಪಾಂಗಣ್ಣಯ ಪೆರ್ಜಿ,ಚಿತ್ತರಂಜನ್ ರಾವ್ ಬದೆಂಜ,ದಿವಾಕರ ರಾವ್ ಪಂಚವಟಿ,ಧರ್ಮಪಾಲ ರಾವ್ ಕಜೆ,ಯೋಗೀಶ ಕುಲಾಲ್ ಅಜ್ಜಿಕುಮೇರು,ಲಕ್ಷೀನಾರಾಯಣ ರಾವ್ ಅತೂರು,ಸದಾಶಿವ ಶೆಟ್ಟಿ ಮಾರಂಗ,ಕೆ.ಟಿ ಮೋಹನ ಕಂಪ,ಬಾಲಾಕೃಷ್ಣ ಬೊಳ್ಳರೋಡಿ,ಕರುಣಾಕರ ಗೌಡ ದೊಡ್ಡ ಉರ್ಕ,ಯಶವಂತ ಬಟ್ಟೋಡಿ,ಪ್ರಕಾಶ ಗೌಡ ವಳಂಜ,ದಯಾನಂದ ರಾವ್ ನೀರಾಜೆ,ಸದಾಶಿವ ಗೌಡ ಅರ್ವೆ,ಶಶೀಂದ್ರ ಅಜ್ಜಿಕುಮೇರು,ತೇಜಕುಮಾರ್ ರೈ,ವಳೆಂಜ,ಚಿತ್ತರಂಜನ್ ಶೆಟ್ಟಿ ಬರೆಂಬಾಡಿ,ದಿವಾಕರ ಬದೆಂಜ ,ಪುಷ್ಪರಾಜ ವಳೆಂಜ, ಸೇಸಪ್ಪ ಗೌಡ ಪೆರ್ಜ,ಮೋನಪ್ಪ ಕುಲಾಲ್ ಬೊಳ್ಳರೋಡಿ,ರತ್ನಾವತಿ ಬಟ್ಟೋಡಿ,ಸಂಜೀವ ಗೌಡ ಬಟ್ಟೋಡಿ,ಬಾಲಾಕೃಷ್ಣ ಗೌಡ ಬಟ್ಟೋಡಿ,ವಿಶ್ವನಾಥ ಗೌಡ ಬಟ್ಟೋಡಿ,ಧನಂಜಯ ಗೌಡ ಪೆರ್ಜಿ,ಹುಕ್ರಪ್ಪ ಗೌಡ ಪೆರ್ಜಿ,ಪದ್ಮಯ್ಯ ಗೌಡ ಪೆರ್ಜಿ,ಗೋಪಾಲ ಗೌಡ ಪೆರ್ಜಿ ಸೇರಿದಂತೆ ಪೆರ್ಜಿ, ಬಟ್ಟೋಡಿ,ಕಜೆ,ವಳಂಜ,ಆನ,ಉರ್ಕ, ಅರ್ವೆ ,ಬೊಳ್ಳರೋಡಿ,ನೀರಾಜೆ,ಬರೆಂಬಾಡಿಯ ಭಾಗದ ಜನರು ಹಾಗು ಹಲವು ಮಂದಿ ಹೊರೆಕಾಣಿಕೆ ಸಮರ್ಪಣೆಯಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here