ದಡ್ಡು ಶೀನಪ್ಪ ಪೂಜಾರಿ ನಿಧನ 

0

ಉಪ್ಪಿನಂಗಡಿ:  ಬಿಜೆಪಿಯ ಹಿರಿಯ ಕಾರ್ಯಕರ್ತ, ಉಪ್ಪಿನಂಗಡಿ ಗ್ರಾಮ ಪಂಚಾಯತ್‌ ಮಾಜಿ ಸದಸ್ಯ ಹಾಗೂ ಬಿಜೆಪಿ ಒಬಿಸಿ ಮೋರ್ಚಾದ ಗ್ರಾಮಾಂತರ ಮಂಡಲ ಅಧ್ಯಕ್ಷ ಸುನೀಲ್‌ ಕುಮಾರ್‌ ದಡ್ಡು ಅವರ ತಂದೆ ಶೀನಪ್ಪ ಪೂಜಾರಿ ಅಲ್ಪಕಾಲದ ಅನಾರೋಗ್ಯದಿಂದ ಎ.9ರಂದು  ಮೃತ ಪಟ್ಟಿದ್ದಾರೆ.

ಮೃತರು ಐದು ಸಲ ಉಪ್ಪಿನಂಗಡಿ ಗ್ರಾಮ ಪಂಚಾಯತ್‌ ಸದಸ್ಯರಾಗಿ ಆಯ್ಕೆಯಾಗಿದ್ದರು. ತನ್ನ ಅವಧಿಯಲ್ಲಿ ಅಲೆಮಾರಿ ಜನಾಂಗಕ್ಕೆ ಅರ್ತಿಲ ಎಂಬಲ್ಲಿ ನಿವೇಶನವನ್ನು ನೀಡಿ ಅವರು ಅಲ್ಲಿ ಶಾಶ್ವತವಾಗಿ ನೆಲೆಸುವಂತೆ ಮಾಡಿದ್ದರು. 

 ತೀರ ಗ್ರಾಮೀಣ ಪ್ರದೇಶವಾದ ತನ್ನ ವಾರ್ಡಿನಲ್ಲಿ ಮೊದಲ ಬಾರಿಗೆ  ಸಾರ್ವ ಜನಿಕ ಕುಡಿಯುವ  ನೀರಿನ ಸಂಪರ್ಕ ಕಲ್ಪಿಸಿದ್ದಲ್ಲದೇ. ಎಲ್ಲಾ ಕಡೇ  ರಸ್ತೆಯನ್ನು ನಿರ್ಮಿಸಿದ್ದರು.  ಹೀಗೆ ಹಲವು ಅಭಿವೃದ್ದಿ ಕೆಲಸದ ಮೂಲಕ ಜನ ಮನ್ನಣೆ  ಗಳಿಸಿದ್ದರು. 

LEAVE A REPLY

Please enter your comment!
Please enter your name here