ಪುತ್ತೂರಿನಲ್ಲಿ ಎನ್ಎಸ್ ಯುಐಯ ಸಂಸ್ಥಾನ ದಿನಾಚರಣೆ

0

ಪುತ್ತೂರು:  ಎನ್ಎಸ್ ಯುಐ ನ 52 ನೇ ಸಂಸ್ಥಾಪನಾ ದಿನದ ಅಂಗವಾಗಿ  ಪುತ್ತೂರು ಬ್ಲಾಕ್ ಕಚೇರಿಯಲ್ಲಿ ಜಿಡೆಕಲ್ಲು ಕಾಲೇಜು ಎನ್ಎಸ್ ಯುಐಅಧ್ಯಕ್ಷರಾದ ಎಡ್ವರ್ಡ್ ಅವರ ಅಧ್ಯಕ್ಷತೆಯಲ್ಲಿ ದ್ವಜಾರೋಹಣ ಕಾರ್ಯಕ್ರಮ ಎ.10ರಂದು ನಡೆಯಿತು.  ಸಂಸ್ಥಾಪನಾ ದಿನದ ಅಂಗವಾಗಿ ಪುತ್ತೂರಿನ ಕೆಲವು ಕಡೆಗಳಲ್ಲಿ ಎನ್ಎಸ್ ಯುಐ ಕಾರ್ಯಕರ್ತರು ಸಿಹಿತಿಂಡಿ ವಿತರಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೋರಿಸ್ ಮಸ್ಕರೇನಸ್ ಅವರು ಮಾತನಾಡಿದರು, ನಂತರ ಮಾತನಾಡಿದಎನ್ಎಸ್ ಯುಐಜಿಲ್ಲಾ ಮುಖಂಡರಾದ ಬಾತೀಷ್ ಆಳಕೆಮಜಲು ಸದ್ಯದ ಪರಿಸ್ಥಿತಿಯಲ್ಲಿ ಕಾಲೇಜು ಕ್ಯಾಂಪಸ್ ಗಳಲ್ಲಿ ಎನ್ಎಸ್ ಯುಐ ಅನಿವಾರ್ಯತೆಯ ಕುರಿತಾಗಿ ಮಾತನಾಡಿದರು.

ಸಭೆಯಲ್ಲಿ ನಾಯಕರಾದ ಸಿರಿಲ್ ರೊಡ್ರಿಗಸ್, ಫಯಾಜ್, ಮಂಜುನಾಥ್, ಹಾರಿಸ್, ರಾಫಿಹ್, ಯಸ್ಟರ್ ಪಿಂಟೋ, ನೌಷಾದ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here