ಬಿದ್ದು ಸಿಕ್ಕಿದ ಮೊಬೈಲ್ ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕ ಮೆರೆದ ಕಾಣಿಯೂರಿನ ಪರಮೇಶ್ವರ ಅನಿಲ

0

ಕಾಣಿಯೂರು: ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಸಂಚಾಲಕ ಪರಮೇಶ್ವರ ಅನಿಲರವರು ಯುವಕ ಮಂಡಲದ ಸಭೆ ಮುಗಿಸಿ ಬರುತ್ತಿರುವಾಗ ದಾರಿ ಮಧ್ಯೆ ಬಿದ್ದು ಸಿಕ್ಕಿದ ಬೆಲೆಬಾಳುವ ಮೊಬೈಲ್ ನ್ನು ಅದರ ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.ಇವರು ಸ.ಹಿ.ಪ್ರಾ.ಶಾಲೆ ಕಾಣಿಯೂರು ಇದರ ಎಸ್ ಡಿಎಂಸಿ ಅಧ್ಯಕ್ಷರಾಗಿದ್ದು, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಲಿಯ ಮಾಜಿ ಅಧ್ಯಕ್ಷರಾಗಿ,ಕಾಣಿಯೂರು ವಲಯ ಟೈಲರ್ಸ್ ಅಸೋಸಿಯೇಷನ್ ನ ಕೋಶಾಧಿಕಾರಿಯಾಗಿ ಮತ್ತು ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಇಲ್ಲಿನ ಸ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಾದ ಕಿಶನ್ ಓಡಬಾಯಿ ಮತ್ತು ಅನ್ವಿತ್ ಮಾದೋಡಿ ಯವರಿಗೆ ಬಿದ್ದು ಸಿಕ್ಕಿದ ಮೊಬೈಲ್ ನ್ನು ಅದರ ವಾರಸುದಾರರಿಗೆ ಹಿಂತಿರುಗಿಸಿ ವಿದ್ಯಾರ್ಥಿಗಳು ಪ್ರಾಮಾಣಿಕತೆ ಯನ್ನು ಮೆರೆದಿದ್ದರು.

LEAVE A REPLY

Please enter your comment!
Please enter your name here