ಫಿಲೋಮಿನಾದಲ್ಲಿ ನಿವೃತ್ತ ಪ್ರಾಧ್ಯಾಪಕರಿಗೆ ಬೀಳ್ಕೊಡುಗೆ ಸನ್ಮಾನ

0

 

  • ತಲೆಮಾರುಗಳ ನಿರ್ಮಾಣದ ಶಿಕ್ಷಕ ವೃತ್ತಿ ಅತ್ಯಂತ ಪಾವಿತ್ರ್ಯದ್ದು-ವಂ|ಲಾರೆನ್ಸ್ ಮಸ್ಕರೆನ್ಹಸ್

ಪುತ್ತೂರು:ವಿದ್ಯಾರ್ಥಿಗಳಿಗೆ ಸರಿಯಾದ ದಾರಿಯನ್ನು ತೋರಿಸಿ ಅವರ ಜೀವನವನ್ನು ರೂಪಿಸುವ ಗುರುತರ ಹೊಣೆ ಶಿಕ್ಷಕರದ್ದು. ಇದು ತಲೆಮಾರುಗಳ ನಿರ್ಮಾಣದ ಅತ್ಯಂತ ಪವಿತ್ರದ ಕಾರ್ಯ. ಅಂಥ ಕಾರ್ಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ ಧನ್ಯತೆ ಮೂಡುತ್ತದೆ ಎಂದು ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೆನ್ಹಸ್‌ರವರು ಹೇಳಿದರು.

ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸಮಾಜಶಾಸ್ತ್ರ ವಿಭಾಗದ ಪ್ರೊ|ಜಾನ್ ಬಿ ಸಿಕ್ವೇರಾ, ಸಸ್ಯಶಾಸ್ತ್ರ ವಿಭಾಗದ ಡಾ|ಪ್ರಸನ್ನ ರೈ ಮತ್ತು ಪ್ರಾಣಿಶಾಸ್ತ್ರ ವಿಭಾಗದ ಪ್ರೊ|ಮೀನಾಕ್ಷಿರವರ ಬೀಳ್ಕೊಡುಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ನಿವೃತ್ತಗೊಂಡ ಫಿಲೋಮಿನಾ ಕಾಲೇಜಿನ ಈ ಮೂವರು ಶಿಕ್ಷಣ ರಂಗಕ್ಕೆ ಮೂರು ದಶಕಗಳಿಗೂ ಮಿಕ್ಕಿ ಅನನ್ಯ ಸೇವೆ ಸಲ್ಲಿಸಿದ್ದಾರೆ. ಅವರುಗಳ ಕರ್ತವ್ಯ ಬದ್ಧತೆ, ನೇರ ನಡೆ ನುಡಿ ವಿದ್ಯಾರ್ಥಿಗಳ ಮನ ಗೆದ್ದ ಅಂಶಗಳು ಎಂದರು.
ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಶ್ರೀಮತಿ ಶಶಿಪ್ರಭಾ, ಪ್ರಾಣಿಶಾಶ್ತ್ರ ವಿಭಾಗ ಮುಖ್ಯಸ್ಥ ಪ್ರೊ|ನಾಗರಾಜ್, ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ|ನೊರ್ಬರ್ಟ್ ಮಸ್ಕರೇನ್ಹಸ್‌ರವರು ನಿವೃತ್ತರ ಬಗ್ಗೆ ಮಾತನಾಡಿದರು. ಬಳಿಕ ನಿವೃತ್ತ ಪ್ರಾಧ್ಯಾಪಕರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಟಾಫ್ ಎಸೊಸಿಯೇಶನ್ ಅಧ್ಯಕ್ಷರಾದ ಪ್ರೊ|ಝುಬೇರ್ ಸ್ವಾಗತಿಸಿ, ಪ್ರೊ|ವೆಂಕಟೇಶ್ವರಿ ವ೦ದಿಸಿದರು. ಶ್ರೀಮತಿ ಲವಿನಾ ಲ್ಯಾನ್ಸಿ ಪಿಂಟೋ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here