ಉಪ್ಪಿನಂಗಡಿ: ಶೆಡ್‌ನಲ್ಲಿ ನಿಲ್ಲಿಸಿದ್ದ ಬೈಕ್ ಕಳವು – ಗುಂಡ್ಯದಲ್ಲಿ ಅಪಘಾತ, ಸವಾರ ಗಂಭೀರ ಗಾಯ

0

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಹಿರೇಬಂಡಾಡಿ ಗ್ರಾಮದ ಕೊಳ್ಳೇಜಾಲ್ ನಿವಾಸಿ ಮಹಮ್ಮದ್ ಎಂಬವರು ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿ ಜೈನ ಬಸದಿ ಸಮೀಪ ಮನೆಯೊಂದರ ಶೆಡ್‌ನಲ್ಲಿ ತನ್ನ ಬೈಕನ್ನು ಎಂದಿನಂತೆ ನಿಲ್ಲಿಸಿ ಹೊರ ಜಿಲ್ಲೆಗೆ ಹೋಗಿದ್ದು, ನಕಲಿ ಕೀ ಬಳಸಿ ಬೈಕ್ ಕಳವು ಮಾಡಲಾಗಿದೆ. ಈ ಸಂಬಂಧ ಮಹಮ್ಮದ್‌ರ ಪುತ್ರಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಅಪಘಾತಕ್ಕೀಡಾಯಿತು ಬೈಕ್:
ಉಪ್ಪಿನಂಗಡಿಯಲ್ಲಿ ಬೈಕನ್ನು ಕಳವು ಮಾಡಿ ಪರಾರಿಯಾಗುತ್ತಿದ್ದಾಗ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಬೈಕ್‌ಗೆ ಲಾರಿಯೊಂದು ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವುದಾಗಿ ತಿಳಿದು ಬಂದಿದೆ.

ಅಪಘಾತಕ್ಕೀಡಾದ ಬೈಕ್ ಸಂಖ್ಯೆಯ ಆಧಾರದಲ್ಲಿ ಬೈಕ್ ಮಾಲಕರ ಪತ್ತೆ ಕಾರ್ಯ ನಡೆಸಿದಾಗ ಬೈಕ್ ಮಾಲಕ ಮಹಮ್ಮದ್ ತಾನು ಬೈಕನ್ನು ಉಪ್ಪಿನಂಗಡಿಯಲ್ಲಿ ನಿಲ್ಲಿಸಿ ಕಾರ್ಯ ನಿಮಿತ್ತ ಹೊರ ಜಿಲ್ಲೆಯಲ್ಲಿರುವುದಾಗಿ ತಿಳಿಸಿದಾಗಲೇ ಬೈಕ್ ಕಳವಿಗೀಡಾಗಿರುವುದು ಬೆಳಕಿಗೆ ಬಂದಿದೆ.

LEAVE A REPLY

Please enter your comment!
Please enter your name here