ಶ್ರೀಸತ್ಯಸಾಯಿ ಶಿಶುವಿಕಾಸ ವಿದ್ಯಾಕೇಂದ್ರದ ಮಕ್ಕಳ ಹಬ್ಬ

0

ಪುತ್ತೂರು: ಶ್ರೀಸತ್ಯಸಾಯಿ ಶಿಶುವಿಕಾಸ ವಿದ್ಯಾ ಕೇಂದ್ರದ ವಾರ್ಷಿಕ ಮಕ್ಕಳ ಹಬ್ಬ ಫೆ.1 ರಂದು ಕೋರ್ಟ್‌ರಸ್ತೆಯಲ್ಲಿರುವ ಶ್ರೀಸತ್ಯಸಾಯಿ ಮಂದಿರದಲ್ಲಿ ಜರುಗಿತು. ವಿವೇಕಾನಂದ CBSE ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಭರತ್ ಪೈ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀಸತ್ಯಸಾಯಿ ಸೇವಾ ಸಂಸ್ಥೆಗಳ ಜಿಲ್ಲಾಧ್ಯಕ್ಷ ಪ್ರಸನ್ನ ಯನ್. ಭಟ್, ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಡಾ. ಸತ್ಯಸುಂದರ ರಾವ್ ಮತ್ತು ವಿದ್ಯಾಕೇಂದ್ರದ ಸಂಚಾಲಕ ಶಿವರಾಮ ಕಜೆ ಶುಭಹಾರೈಸಿದರು. ಸಾಯಿ ಸುಬ್ರಹ್ಮಣ್ಯ ಪ್ರಾರ್ಥಿಸಿದರು. ಶಿಕ್ಷಕಿ ಚಿತ್ರಾಕ್ಷಿ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ಚಂದ್ರಕಲಾ ವಂದಿಸಿದರು. ಸಮಿತಿಯ ಸಂಚಾಲಕ ರಘುನಾಥ ರೈ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here