ಕೆದಂಬಾಡಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ

0

ಪುತ್ತೂರು: ಕೆದಂಬಾಡಿ ವಲಯ ಕಾಂಗ್ರೆಸ್‌ನ ವತಿಯಿಂದ ಪಕ್ಷದ ಬಿ.ಎಲ್.ಎ ಹಾಗೂ ಬೂತ್ ಅಧ್ಯಕ್ಷರ ಸಮಾವೇಶ ನಡೆಸುವ ಕುರಿತು ಪೂರ್ವಭಾವಿ ಸಮಾಲೋಚನಾ ಸಭೆಯು ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ ರೈ ಕೋರಿಕ್ಕಾರುರವರ ಅಧ್ಯಕ್ಷತೆಯಲ್ಲಿ ಫೆ.9 ರಂದು ಕುಂಬ್ರ ನಿಶ್ಮಿತಾ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ್‌ರವರು ಸಮಾವೇಶದ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾರ್ಯದರ್ಶಿ ಅಮಲ ರಾಮಚಂದ್ರ, ದಿವ್ಯಪ್ರಭಾ ಚಿಲ್ತಡ್ಕ, ಅಬ್ದುಲ್ ಶಕೂರ್ ಹಾಜಿ, ಮೌರೀಸ್ ಮಸ್ಕರೇನಸ್, ಮನೋಹರ ರೈ ಎಂಡೆಸಾಗು, ಅಬ್ದುಲ್ ಹಾಜಿ ಗಟ್ಟಮನೆ, ಗ್ರಾಪಂ ಸದಸ್ಯೆಯರಾದ ಅಸ್ಮಾ ಗಟ್ಟಮನೆ ಮತ್ತು ಸುಜಾತ, ಮೆಲ್ವಿನ್ ಮೊಂತೆರೋ, ಇಸ್ಮಾಯಿಲ್ ಗಟ್ಟಮನೆ, ಹಬೀಬ್, ತಾರಾನಾಥ ಶೆಟ್ಟಿ, ಇಸುಬು, ಸಂದೇಶ, ಹೈದರ್, ಮುಸ್ತಾಫಾ, ಸತೀಶ್ ಕೆಡೆಂಜಿ ಮತ್ತಿತರರು ಉಪಸ್ಥಿತರಿದ್ದರು. ವಲಯ ಕಾಂಗ್ರೆಸ್ ಕಾರ್ಯದರ್ಶಿ ಅಶ್ರಫ್ ಸಾರೆಪುಣಿ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here