![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಕೆಯ್ಯೂರು : ಗದಗ ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯದಲ್ಲಿ ಫೆ.11ರಂದು ನಡೆಯುವ ಮಕ್ಕಳ ಹಕ್ಕುಗಳ ಗ್ರಾಮಸಭೆ ಕುರಿತ ರಾಜ್ಯಮಟ್ಟದ ಸಮ್ಮೇಳನಕ್ಕೆ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ನ ಪ್ರಾಥಮಿಕ ವಿಭಾಗದ 8 ನೇ ತರಗತಿಯ ಜನನಿ (ಕೆಯ್ಯೂರಿನ ವಿಶ್ವನಾಥ ಮತ್ತು ಭವಾನಿ ದಂಪತಿಯ ಪುತ್ರಿ) ಹಾಗೂ 7ನೇ ತರಗತಿಯ ಆಕಾಶ್ ಕೆ ಎಸ್ (ಅಂಕತ್ತಡ್ಕ ಕೆ. ಸುಬ್ರಹ್ಮಣ್ಯ ಮತ್ತು ಲತಾ ಬಿ ಕೆ ದಂಪತಿಯ ಪುತ್ರ) ಆಯ್ಕೆಯಾಗಿದ್ದಾರೆ.