ಪಡ್ನೂರಿನಲ್ಲಿ ಮ್ಯಾಟ್ ಕಬಡ್ಡಿ ಪಂದ್ಯಾಟ, ಹಗ್ಗಜಗ್ಗಾಟದ ಆಮಂತ್ರಣ ಬಿಡುಗಡೆ

0

ಪುತ್ತೂರು: ಶ್ರೀಧೂಮಾವತಿ ಯುವಕ ಮಂಡಲ ಜುಮಾದಿಪಲ್ಕೆ ಪಡ್ನೂರು ಇದರ ಆಶ್ರಯದಲ್ಲಿ ದಿ.ವಾಸು ನಾಯ್ಕ ಮುಂಡಾಜೆ ಮತ್ತು ದಿ.ಡೊಂಬಯ್ಯ ಗೌಡ ಕಡ್ತಿಮಾರ್ ಇವರ ಸ್ಮರಣಾರ್ಥ ದಿ.ಪಟ್ಟೆಗುತ್ತು ಶಾಂತಕುಮಾರ ಆರಿಗ ಅಂಕಣದಲ್ಲಿ ಫೆ.18ರಂದು ಪಡ್ನೂರು ಜುಮಾದಿಪಲ್ಕೆಯಲ್ಲಿ ನಡೆಯುವ ಸಮನ್ವಯ ಟ್ರೋಫಿ 58 ಕೆ.ಜಿ ವಿಭಾಗದ ಪುರುಷರ ಹೊನಲು ಬೆಳಕಿನ ಪ್ರೋ.ಮಾದರಿಯ ಮ್ಯಾಟ್ ಕಬಡ್ಡಿ ಪಂದ್ಯಾಟ ಹಾಗೂ 510 ಕೆ.ಜಿ.ವಿಭಾಗದ ಹಗ್ಗಜಗ್ಗಾಟ ಕಾರ್ಯಕ್ರಮ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ನಡೆಯಿತು. ಕೃಷಿಕ ಭರತ್ ಕುಮಾರ್ ಆರಿಗ ಪಟ್ಟೆಗುತ್ತು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಶೀನಪ್ಪ ಪೂಜಾರಿ ಪಡ್ನೂರು ಸಹಿತ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here