ಮನೆಗೆ ಹಾನಿ; ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧನಸಹಾಯ

0

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಡಬ ಇದರ ನೆಲ್ಯಾಡಿ ವಲಯದ ಪಡುಬೆಟ್ಟು ಒಕ್ಕೂಟದ ಸದಸ್ಯೆ ವಾರಿಜರವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದ್ದು, ಇವರಿಗೆ ಕ್ಷೇತ್ರದ ವತಿಯಿಂದ 10 ಸಾವಿರ ರೂ.ಧನಸಹಾಯ ಮಂಜೂರಾಗಿರುತ್ತದೆ. ಇದರ ಮಂಜೂರಾತಿ ಪತ್ರವನ್ನು ಒಕ್ಕೂಟದ ಸಭೆಯಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಪಡುಬೆಟ್ಟು ಒಕ್ಕೂಟದ ಅಧ್ಯಕ್ಷ ಜಾನ್ ಮೊಂತೇರೋ, ಸೆಲ್ಕೋ ಸೋಲಾರ್ ಪ್ರತಿನಿಧಿ ಚಿದಾನಂದ್, ಒಕ್ಕೂಟದ ಪದಾಧಿಕಾರಿಗಳು ಮತ್ತು ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here