ಪತಿಯ ಸ್ಮರಣಾರ್ಥ ಮುಂಡೂರು ಶಾಲೆಗೆ ಕಲಿಕಾ ಕುಟೀರ ನಿರ್ಮಿಸಿಕೊಟ್ಟ ಗುಲಾಬಿ ಎನ್ ಶೆಟ್ಟಿಯವರಿಗೆ ಸನ್ಮಾನ

0

ಪುತ್ತೂರು: ನಾರ್ಯ ಮುಂಡಾಡಿಗುತ್ತು ದಿ| ನಾರಾಯಣ ಶೆಟ್ಟಿ ಕಂಪ ಸ್ಮರಣಾರ್ಥ ಮುಂಡೂರು ಸ.ಉ.ಹಿ.ಪ್ರಾ.ಶಾಲೆಗೆ ಕಲಿಕಾ ಕುಟೀರ ‘ನಾರಾಯಣಿ’ ನಿರ್ಮಿಸಿಕೊಟ್ಟ ದಿ|ನಾರಾಯಣ ಶೆಟ್ಟಿಯವರ ಪತ್ನಿ ಗುಲಾಬಿ ಎನ್ ಶೆಟ್ಟಿ ಅವರನ್ನು ಫೆ.13ರಂದು ನಡೆದ ಕಲಿಕಾ ಕುಟೀರ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಗುಲಾಬಿ ಎನ್ ಶೆಟ್ಟಿಯವರ ಪುತ್ರಿಯರಾದ ರೇಶ್ಮಾ ಶೆಟ್ಟಿ, ಸುಶ್ಮಾ ರೈ, ಅಳಿಯಂದಿರಾದ ಚಂದ್ರಶೇಖರ್ ಶೆಟ್ಟಿ, ದಾಮೋದರ್ ರೈ, ಮೊಮ್ಮಕ್ಕಳಾದ ಸುಶೀಕ್ತ್ ಶೆಟ್ಟಿ ಶ್ರೀಜಿತ್ ಶೆಟ್ಟಿ, ಸೃಷ್ಠಿ ರೈ, ಸಿದ್ದಾಂತ್ ರೈ ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿದ ಗುಲಾಬಿ ಎನ್ ಶೆಟ್ಟಿ ಮಾತನಾಡಿದರು.

LEAVE A REPLY

Please enter your comment!
Please enter your name here