ನರಿಮೊಗರು ಪ್ರಾ.ಕೃ.ಪ.ಸ ಸಂಘದಲ್ಲಿ ರಸಗೊಬ್ಬರ ಮತ್ತು ಕೀಟನಾಶಕ ಮಾರಾಟ ಮಳಿಗೆ ಪ್ರಾರಂಭ

0

ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ರಸಗೊಬ್ಬರ ಮತ್ತು ಕೀಟನಾಶಕ ಮಾರಾಟ ಮಳಿಗೆಯನ್ನು ಪ್ರಾರಂಭಿಸಲಾಯಿತು. ಮಳಿಗೆಯನ್ನು ಫೆ.14ರಂದು ಸಂಘದ ಅಧ್ಯಕ್ಷ ವಿ.ಬಾಬು ಶೆಟ್ಟಿ ವೀರಮಂಗಲರವರು ಉದ್ಘಾಟಿಸಿದರು.

ಸಂಘದ ಹಿರಿಯ ಸದಸ್ಯರಾದ ರತ್ನಾಕರ ಪಿ.ಎಸ್., ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‌ನ ವಲಯ ಮೇಲ್ವಿಚಾರಕರಾದ ವಸಂತ್ ಎಸ್, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಧುಕರ ಹೆಚ್, ಸಂಘದ ಉಪಾಧ್ಯಕ್ಷೆ ಲತಾ ಮೋಹನ ಗೌಡ ಪಾದೆ, ನಿರ್ದೇಶಕರುಗಳಾದ ಹೊನ್ನಪ್ಪ ಪೂಜಾರಿ ಕೈಂದಾಂಡಿ, ವಿಶ್ವನಾಥ ನಾಯ್ಕ, ಪರಮೇಶ್ವರ ಭಂಡಾರಿ, ಶಿವರಾಮ ಪಜಿರೋಡಿ, ಯಮುನಾ, ಕುಶಾಲಪ್ಪ ಗೌಡ ಮಜಲು, ಹಸನ್ ಎ, ನಾರಾಯಣ ಪೂಜಾರಿ ಬೇರಿಕೆ, ವಿಜೇಶ್ ಕುಮಾರ್ ಎಂ, ಸಂಘದ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಂಘದ ಮಾಜಿ ನಿರ್ದೇಶಕ ನವೀನ್ ರೈ ಶಿಬರ, ದಿನೇಶ್ ಆನಡ್ಕ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here