ಚೆಕ್ ಅಮಾನ್ಯ ಪ್ರಕರಣ ನ್ಯಾಯಾಲಯದಲ್ಲಿ ಮುಕ್ತಾಯ

0

ಪುತ್ತೂರು:ತನ್ನ ವಿರುದ್ಧದ ಚೆಕ್ ಅಮಾನ್ಯ ಪ್ರಕರಣ ನ್ಯಾಯಾಲಯದಲ್ಲಿ ಮುಕ್ತಾಯಗೊಂಡಿದೆ ಎಂದು ಶಾಂತಿಗೋಡು ರಾಮಣ್ಣ ಶೆಟ್ಟಿಯವರ ಮಗ ಅಕ್ಷಿತ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಪುತ್ತೂರು ಇಲ್ಲಿ ಚೆಕ್ ಅಮಾನ್ಯ ಕೇಸಿನ ತೀರ್ಪಿನ ವಿರುದ್ಧ ನಾನು ಕರ್ನಾಟಕ ಉಚ್ಛನ್ಯಾಯಾಲಯಕ್ಕೆ ಪ್ರಕರಣದ ಬಗ್ಗೆ ಮೇಲ್ಮನವಿ ಸಲ್ಲಿಸಿದ್ದೆ.ಈ ಮಧ್ಯೆ, ಪ್ರಕರಣದ ಫಿರ್ಯಾದಿ ರವೀಂದ್ರ ರೈ ನೆಕ್ಕಿಲು ಮತ್ತು ನಾನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ತೀರ್ಪಿನಂತೆ ಸಿವಿಲ್ ಜಡ್ಜ್ ನ್ಯಾಯಾಲಯ, ಕಿರಿಯ ವಿಭಾಗ ಪುತ್ತೂರು ಇಲ್ಲಿ ಪ್ರಕರಣವನ್ನು ಫೆ.13ರಂದು ರಾಜಿಯಲ್ಲಿ ಮುಗಿಸಿಕೊಂಡಿರುತ್ತೇವೆ.ಇದರಂತೆ ಸಿವಿಲ್ ಜಡ್ಜ್ ನ್ಯಾಯಾಲಯ ಕಿರಿಯ ವಿಭಾಗ ಪುತ್ತೂರು ಇಲ್ಲಿ ಸದ್ರಿ ಪ್ರಕರಣವನ್ನು ರಾಜಿಯಲ್ಲಿ ಮುಕ್ತಾಯಗೊಳಿಸಲಾಗಿದೆ ಎಂದು ಅಕ್ಷಿತ್ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here