ನೆಲ್ಯಾಡಿ-ಕೋಲ್ಪೆ ಮಖಾಂ ಉರೂಸ್ ಉದ್ಘಾಟನೆ

0

ನೆಲ್ಯಾಡಿ: ಕಡಬ ತಾಲೂಕಿನ ಕೊಣಾಲು ಗ್ರಾಮದ ಕೋಲ್ಪೆ ಸೈಯ್ಯದ್ ಮಲ್ಹರ್ ವಲಿಯುಲ್ಲಾಹಿ ದರ್ಗಾ ಶರೀಫ್ ಇಲ್ಲಿ ನಡೆಯುವ ಕೋಲ್ಪೆ ಮಖಾಂ ಉರೂಸ್ ಹಾಗೂ 4 ದಿನಗಳ ಮತ ಪ್ರವಚನದ ಉದ್ಘಾಟನಾ ಸಮಾರಂಭ ಫೆ.16ರಂದು ರಾತ್ರಿ ನಡೆಯಿತು.


ನೆಲ್ಯಾಡಿ ಬಿಜೆಎಂನ ಖತೀಬರಾದ ಶೌಕತ್ ಅಲಿ ಅಮಾನಿ ಅವರು ಉದ್ಘಾಟಿಸಿದರು. ಕೋಲ್ಪೆ ಮುದರ್ರೀಸ್ ಮೊಹಮ್ಮದ್ ಶರೀಫ್ ದಾರಿಮಿ ಅಲ್ ಹೈತಮಿ ಅವರು ದು:ವಾ ನೆರವೇರಿಸಿದರು. ಕೋಲ್ಪೆ ಬಿಜೆಎಂ ಗೌರವಾಧ್ಯಕ್ಷ ಬಿ.ಎಸ್.ಬಾವ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ಹಮೀದ್ ಪೈಝಿ ಕಿಲ್ಲೂರು ಅವರು ಮುಖ್ಯ ಪ್ರಭಾಷಣ ಮಾಡಿದರು.

ಕೋಲ್ಪೆ ಬಿಜೆಎಂ ಅಧ್ಯಕ್ಷ ಕೆ.ಕೆ.ಅಬೂಬಕ್ಕರ್ ಕೋಲ್ಪೆ, ಬೀಟಿಗೆ ಬಿಜೆಎಂ ಖತೀಬರಾದ ದಾವೂದ್ ಇಸ್ಮಾಯಿಲ್ ಫೈಝಿ, ಎಸ್‌ಕೆಎಸ್‌ಎಸ್‌ಎಫ್ ಕೋಲ್ಪೆ ಶಾಖೆ ಅಧ್ಯಕ್ಷ ಸಲೀಂ ಎಂ.ಕೆ., ಕೋಲ್ಪೆ ಮದರಸ ಉಸ್ತುವಾರಿ ಎಸ್.ಕೆ.ರಝಾಕ್, ಅಡ್ಡೈ ಹಸನಿಯ್ಯ ಎಜುಕೇಶನಲ್ ಟ್ರಸ್ಟ್ ಚೆಯರ್‌ಮಾನ್ ಶಾಫಿ ಸಖಾಫಿ ಅಲ್‌ಖಾಮಿಲ್, ಪಟ್ಟೆ ಬಿಜೆಎಂ ಲಾರಿ ಮಾಲಕ ಮುಹಮ್ಮದ್, ನೆಲ್ಯಾಡಿ ಎಫ್‌ಎಫ್ ಕನ್‌ಸ್ಟ್ರಕ್ಷನ್‌ನ ರಹಿಮಾನ್ ಪಟ್ಟೆ, ಕಳಾರ ಜೆಎಂ ಖತೀಬರಾದ ಹಾರಿಸ್ ರಹ್ಮಾನಿ, ಬೋಳದಬೈಲು ರಿಫಾಯಿಯ ಜೆ.ಎಂ.ಅಧ್ಯಕ್ಷ ಎಂ.ಎಚ್.ಹಂಝ ಮದನಿ, ಮೊರಂಕಳ ನೂರುಲ್‌ಹುದಾ ಮದ್ರಸದ ಎಂ.ಎನ್.ನಝೀರ್, ಕೊಚ್ಚಿಲ ಅನ್ಸಾರುಲ್ ಮುಸ್ಲಿಮೀನ್ ಯಂಗ್‌ಮೆನ್ಸ್ ಅಧ್ಯಕ್ಷ ಎಚ್.ಎಸ್.ಜಲೀಲ್, ಮಾನವ ಹಕ್ಕುಗಳ ಜನಜಾಗೃತಿ ವೇದಿಕೆ ರಾಜ್ಯ ಉಪಾಧ್ಯಕ್ಷ ಖಾದರ್ ಹೊಸಮಜಲು ಮತ್ತಿತರ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕೋಲ್ಪೆ ಬಿಜೆಎಂ ಕೋಶಾಧಿಕಾರಿ ಕೆ.ಎಸ್.ನಾಸಿರ್ ಸಮರಗುಂಡಿ ಸ್ವಾಗತಿಸಿ, ಕೋಲ್ಪೆ ಬಿಜೆಎಂ ಕಾರ್ಯದರ್ಶಿ ರಂಝಾನ್ ಸಾಹೇಬ್ ವಂದಿಸಿದರು. ಕಾರ್ಯದರ್ಶಿ ಕೆ.ಎಚ್.ಸಾದಿಕ್ ವಂದಿಸಿದರು. ಕೋಲ್ಪೆ ಬಿಜೆಎಂ, ಗೋಳಿತ್ತೊಟ್ಟು ರಹ್ಮಾನಿಯಾ ಜುಮಾ ಮಸೀದಿ, ಕೋಲ್ಪೆ ಖಲಂದರ್ ಷಾ ದಫ್ ಸಮಿತಿ, ಎಸ್‌ಕೆಎಸ್‌ಎಸ್‌ಎಫ್ ಕೋಲ್ಪೆ ಹಾಗೂ ಗೋಳಿತ್ತೊಟ್ಟು ಶಾಖೆಯ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here