ಫೆ.19: ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಲಕ್ಷ ಪ್ರದಕ್ಷಿಣೆ ಸಂಕಲ್ಪಕ್ಕೆ ಚಾಲನೆ

0

ಪುತ್ತೂರು: ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಧ್ವಜಸ್ಥಂಭ ಮತ್ತು ಬ್ರಹ್ಮರಥ ಸಮರ್ಪಣೆ ಹಾಗೂ ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ನಡೆಯಲಿರುವ ಲಕ್ಷ ಪ್ರದಕ್ಷಿಣೆ ಸಂಕಲ್ಪಕ್ಕೆ ಫೆ.19ರಂದು ಬೆಳಗ್ಗೆ 7 ಘಂಟೆಗೆ ಚಾಲನೆ ದೊರೆಯಲಿದೆ.

ಕ್ಷೇತ್ರದಲ್ಲಿ 2024ರ ಮಾ. 20ರಿಂದ ಮಾ.25ರ ವರೆಗೆ ನಡೆಯಲಿರುವ ನೂತನ ಧ್ವಜಸ್ಥಂಭ ಮತ್ತು ಬ್ರಹ್ಮರಥ ಸಮರ್ಪಣೆ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಪ್ರತೀ ತಿಂಗಳ ಮೂರನೇ ಆದಿತ್ಯವಾರ ಭಕ್ತಾದಿಗಳು ದೇವಸ್ಥಾನಕ್ಕೆ 108 ಸುತ್ತು ಬರುವ ಮೂಲಕ ಲಕ್ಷ ಪ್ರದಕ್ಷಿಣೆ ಸಂಕಲ್ಪ ನೆರವೇರಲಿದ್ದು, ಬ್ರಹ್ಮಕಲಶದ ಸಂದರ್ಭದಲ್ಲಿ ಇದು ಸಂಪನ್ನಗೊಳ್ಳಲಿದೆ‌. ಫೆ.19ರಂದು ಬೆಳಗ್ಗೆ 7 ಘಂಟೆಗೆ ದೇವರ ಪೂಜೆಯ ಬಳಿಕ ಪ್ರಾರ್ಥನೆಯೊಂದಿಗೆ ಲಕ್ಷ ಪ್ರದಕ್ಷಿಣೆ ಸಂಕಲ್ಪ ಪ್ರಾರಂಭಗೊಳ್ಳಲಿದೆ. ಈ ಸೇವೆಯಲ್ಲಿ ಎಲ್ಲರಿಗೂ ಭಾಗವಹಿಸಲು ಅವಕಾಶವಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here