ಪುತ್ತೂರು: ಬನ್ನೂರು ಗ್ರಾಮದ ಪಟ್ಟೆ ಮನೆ ದಯಾನಂದ ಗೌಡ(61ವ)ರವರು ಫೆ. 24 ರಂದು ಹೃದಯಾಘಾತದಿಂದ ನಿಧನರಾದರು.

ಕರ್ನಾಟಕ ಗೇರು ಅಭಿವೃದ್ಧಿ ನಿಗಮದಲ್ಲಿ ಸುದೀರ್ಘ 39 ವರ್ಷಗಳ ಸೇವೆಯನ್ನು ಸಲ್ಲಿಸಿ 2021 ಎಪ್ರಿಲ್ ನಲ್ಲಿ ನಿವೃತ್ತಿಯಾಗಿದ್ದರು. ಇಲಾಖೆಯ ವತಿಯಿಂದ 2 ದಿನದ ಹಿಂದೆಯಷ್ಟೆ ಅವರಿಗೆ ಕುಂದಾಪುರದಲ್ಲಿ ಇಲಾಖಾ ಸೇವೆಗಾಗಿ ಸನ್ಮಾನಿಸಲಾಗಿತ್ತು.

ಮೃತರು ಪತ್ನಿ ರತ್ನಾವತಿ ಮತ್ತು ಪುತ್ರರಾದ ಪ್ರಸಾದ್, ಸೊಸೆ ಅಕ್ಷತಾ ಮತ್ತು ಇನ್ನೊರ್ವ ಪುತ್ರ ದಿಶಾಂತ್ ಮತ್ತು ಸಹೋದರರಾದ ನಿವೃತ್ತ ಎ.ಎಸ್.ಐ ಪಾಂಡುರಂಗ, ಮಾಜಿ ಸೈನಿಕ ಪದ್ಮನಾಭ, ಶಿಕ್ಷಕ ಅಮರನಾಥ ಮತ್ತು ಮೂವರು ಸಹೋದರಿಯನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here