ನೆಲ್ಲಿಗುಂಡಿಯಲ್ಲಿ ಮತ್ತೆ ಚುನಾವಣಾ ಬಹಿಷ್ಕಾರದ ಬ್ಯಾನರ್ ಪ್ರತ್ಯಕ್ಷ !

0

ಪುತ್ತೂರು: ನಗರಸಭೆ ವ್ಯಾಪ್ತಿಯ ಕರ್ಕುಂಜ ನೆಲ್ಲಿಗುಂಡಿ ಕಾಲೋನಿಯಲ್ಲಿ ಇದೀಗ ಚುನಾವಣಾ ಬಹಿಷ್ಕಾರದ ಬ್ಯಾನರ್ ಮತ್ತೆ ಪ್ರತ್ಯಕ್ಷವಾಗಿದೆ.


ಈ ಹಿಂದೆ ನೆಲ್ಲಿಗುಂಡಿ ಕಾಲನಿಗೆ ಹೋಗುವ ರಸ್ತೆ ಸಮಸ್ಯೆ ಇನ್ನೂ ಸಮಸ್ಯೆಯಾಗಿಯೇ ಉಳಿದಿರುವುದರಿಂದ ಮುಂದಿನ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಕೆಲ ದಿನಗಳ ಹಿಂದೆ ಅಳವಡಿಸಿದ್ದ ಬ್ಯಾನರ್‌ನ್ನು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ನಗರಸಭೆ ಅಧಿಕಾರಿಗಳು ತೆರವುಗೊಳಿಸಿದ್ದರು.ಆದರೆ ಇದೀಗ ಅಲ್ಲಿ ಮತ್ತೆ ಬ್ಯಾನರ್ ಪ್ರತ್ಯಕ್ಷಗೊಂಡಿದೆ.


ರಸ್ತೆ ಸಮಸ್ಯೆ ಕುರಿತು ನಗರಸಭೆ ಮತ್ತು ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿದರೂ ಯಾವುದೇ ರೀತಿಯ ಸ್ಪಂದನೆ ನೀಡದೆ ಟೊಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಬ್ಯಾನರ್ ಅಳವಡಿಸಿದ್ದೆವು.ಫೆ.೨೨ರಂದು ನಗರಸಭೆ ಪೌರಾಯುಕ್ತರು ಮತ್ತು ನಗರಸಭೆ ಅಧ್ಯಕ್ಷರು ರಸ್ತೆ ದುರಸ್ತಿ ಮಾಡಿಕೋಡುವುದಾಗಿ ಭರವಸೆ ನೀಡಿದ್ದರು.ಆದರೆ ಇದೀಗ ಯಾವುದೇ ರೀತಿಯ ಕೆಲಸಕಾರ್ಯಗಳನ್ನು ನಡೆಸಲಾಗಲಿಲ್ಲ.ಇದಕ್ಕಾಗಿ ನಮ್ಮ ಕಾಲೋನಿಯ ಎಲ್ಲರೂ ಈ ಸಲದ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಿರುತ್ತೇವೆ.ಇದಕ್ಕೆ ಸ್ಪಂದನೆ ದೊರೆಯದೇ ಇದ್ದಲ್ಲಿ ಪತ್ರಿಕಾಗೋಷ್ಠಿ ಮಾಡಲಿದ್ದೆವೆ ಎಂದು ನೊಂದ ರಸ್ತೆಯ ಫಲಾನುಭವಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here