ಬರಿಮಾರು ಮಹಾಮ್ಮಾಯಿ ದೇವಸ್ಥಾನದ ವಾರ್ಷಿಕೋತ್ಸವ- ಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ಯಕ್ಷಗಾನ ತಾಳಮದ್ದಳೆ

0


ಪುತ್ತೂರು: ಸೂರಿಕುಮೇರು ಸಮೀಪದ ಬರಿಮಾರು ಶ್ರೀ ಮಹಾಮ್ಮಾಯಿ ದೇವಸ್ಥಾನದ ವಾರ್ಷಿಕೋತ್ಸವದ ಅಂಗವಾಗಿ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ “ಸ್ಯಮಂತಕ ಮಣಿ ” ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಆನಂದ ಸವಣೂರು, ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ ( ಜಾಂಬವ ), ಶುಭಾಗಣೇಶ್ ( ಕೃಷ್ಣ ), ಹರಿಣಾಕ್ಷೀ ಜೆ ಶೆಟ್ಟಿ ( ಬಲರಾಮ ), ಮನೋರಮಾ ಜಿ ಭಟ್ ( ನಾರದ ), ಸಹಕರಿಸಿದರು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ವಂದಿಸಿದರು , ಧರ್ಮದರ್ಶಿ ರಾಖೇಶ್ ಪ್ರಭು ದಂಪತಿ ಕಲಾವಿದರನ್ನು ಗೌರವಿಸಿದರು. ಬೊಳುವಾರು ಬಾಬಾರಾಯ ಹೊಟೇಲ್ ಮಾಲಕ ಶಿವಾನಂದ ದಂಪತಿ ಕಾರ್ಯಕ್ರಮ ಪ್ರಾಯೋಜಿಸಿದರು.

LEAVE A REPLY

Please enter your comment!
Please enter your name here