ಮಾ.4 : ಕುಂಬ್ರದಲ್ಲಿ ಮಾತೃಶ್ರೀ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ದಿ. ಕುಂಬ್ರ ಬಾಲಕೃಷ್ಣ ರೈ (ಪಟ್ಲೇರ್) ಸ್ಮರಣಾರ್ಥವಾಗಿ ಮಾತೃಶ್ರೀ ಟ್ರೋಫಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವು ಮಾ. 4 ರಂದು ಕುಂಬ್ರ ಕೆಪಿಎಸ್ ಸ್ಕೂಲ್ ಮೈದಾನದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ಕುಂಬ್ರದ ಮಾತೃಶ್ರೀ ಉದ್ಯಮಿ ಮೋಹನ್‌ದಾಸ್ ರೈ ಕುಂಬ್ರ ರವರ ನಿವಾಸದಲ್ಲಿ ನಡೆಯಿತು.

ಮೋಹನ್‌ದಾಸ್ ರೈಯವರು ಪಂದ್ಯಾಟದ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಪಂದ್ಯಾಟವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಟೂರ್ನಮೆಂಟ್ ಸಂಯೋಜಕರಾದ ಆಚಿ ಕುಂಬ್ರ, ಸಲಾಮುದ್ದೀನ್ ಕುಂಬ್ರ , ಫಾರೂಕ್ ಮಗಿರೆ, ಸಾದಿಕ್ ಮಗಿರೆ, ಶಮಿತ್ ರೈ ಕುಂಬ್ರ, ರಫೀಕ್ ಸಾರೆಪುಣಿ ಉಪಸ್ಥಿತರಿದ್ದರು. 16 ಗ್ರಾಮಗಳ 8 ತಂಡಗಳ ಓಪನ್ ಮಾದರಿಯ 24 ತಂಡಗಳ ಪಂದ್ಯಾಟವಾಗಿರುತ್ತದೆ.

LEAVE A REPLY

Please enter your comment!
Please enter your name here