ಪಾಪೆಮಜಲು ಶ್ರೀ ಬ್ರಹ್ಮಬೈದೇರ್ಕಳ ಗರಡಿ ಮೊಕ್ತೇಸರ , ತಾ.ಪಂ ಮಾಜಿ ಸದಸ್ಯ, ನಾಟಿ ವೈದ್ಯ ಎಂ.ಎಸ್ ಮುಕುಂದ ಶಾಂತಿವನ ನಿಧನ

0


ಪುತ್ತೂರು : ಒಳಮೊಗ್ರು ಗ್ರಾಮದ ಶಾಂತಿವನ ನಿವಾಸಿ ನಾಟಿ ವೈದ್ಯ ಎಂ.ಎಸ್ ಮುಕುಂದ ಶಾಂತಿವನ( 80 ವ) ರವರು ಮಾ. 3 ರಂದು ಸ್ವಗ್ರಹದಲ್ಲಿ ನಿಧನರಾದರು.

ಇವರು ಪಾಪೆಮಜಲು ಶ್ರೀ ಬ್ರಹ್ಮ ಬೈದೇರ್ಕಳ ಗರಡಿಯ ಮೊಕ್ತೇಸರರು, ಪುತ್ತೂರು ತಾಲೂಕು ಪಂಚಾಯತ್ ಮಾಜಿ ಸದಸ್ಯರಾಗಿ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ, ಬಿಲ್ಲವ ಸಂಘ ತಾಲೂಕು ಸಮಿತಿಯ ಜೊತೆ ಕಾರ್ಯದರ್ಶಿ, ಒಳಮೊಗ್ರು ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಕುಂಬ್ರ ಶ್ರೀರಾಮ ಭಜನಾ ಮಂದಿರದ ಕಾರ್ಯದರ್ಶಿಯಾಗಿ, ಅರಿಯಡ್ಕ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಯಾಗಿ ಹೀಗೆ ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ಪುಷ್ಪಾವತಿ ಪುತ್ರಿಯರಾದ ಅನಿತಾ, ಆಶಾ, ಅಮಿತಾ ಹಾಗೂ ಪುತ್ರ ಅಶೋಕ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಸಂಸ್ಕಾರವು ಮಾ. 3ರಂದು ಮಧ್ಯಾಹ್ನ 1.30 ಕ್ಕೆ ಶಾಂತಿವನದ ಸ್ವಗ್ರಹದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here