ಕೆದಂಬಾಡಿ ವಿಜಯ ಸಂಕಲ್ಪ ಯಾತ್ರೆಯ ಪೂರ್ವಭಾವಿ ಸಭೆ

0

ಕೆಯ್ಯೂರು: ಭಾರತೀಯ ಜನತಾ ಪಾರ್ಟಿ ಕೆದಂಬಾಡಿ ಬಿಜೆಪಿ ಶಕ್ತಿ ಕೇಂದ್ರದ ಸಭೆಯು  ಶ್ರೀ ದೇವತಾ ಭಜನಾ ಮಂದಿರ ತಿಂಗಳಾಡಿಯಲ್ಲಿ  ಪುತ್ತೂರು ಶಾಸಕ  ಸಂಜೀವ ಮಠಂದೂರು ಉಪಸ್ಥಿತಿಯಲ್ಲಿ ಮಾ11ರಂದು ನಡೆಯುವ ವಿಜಯ ಸಂಕಲ್ಪ ರಥ ಯಾತ್ರೆಯ ಪೂರ್ವಭಾವಿ ಸಭೆಯು ಮಾ6ರಂದು ನಡೆಯಿತು.

ಕೆದಂಬಾಡಿ ಗ್ರಾಮದಿಂದ ಅತಿಹೆಚ್ಚಿನ ಸಂಖ್ಯೆಯಲ್ಲಿ, ಪುತ್ತೂರಿನಲ್ಲಿ ನಡೆಯುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೋಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ  ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಜಯಕುಮಾರ್ ರೈ ಕೋರಂಗ, ಶಕ್ತಿ ಕೇಂದ್ರದ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ, ಸಹಪ್ರಮುಖ್ ರೇಖಾ ರಾಘವ ಗೌಡ ಕೆರೆಮೂಲೆ, ಟಿಎಪಿಸಿಎಂಎಸ್ ಅಧ್ಯಕ್ಷ  ಕೃಷ್ಣಕುಮಾರ್ ರೈ ಕೆದಂಬಾಡಿ ಗುತ್ತು,ಕೆದಂಬಾಡಿ ಗ್ರಾ. ಪಂ. ಅಧ್ಯಕ್ಷ ರತನ್ ರೈ ಕುಂಬ್ರ,  ಉಪಾಧ್ಯಕ್ಷ ಭಾಸ್ಕರ್ ರೈ ಮಿತ್ರಂಪಾಡಿ ,ದೇವತಗಿರಿ ಭಜನಾಮಂದಿರ ಅಧ್ಯಕ್ಷ ಜಯರಾಮ್ ರೈ ಮಿತ್ರಂಪಾಡಿ ಕೆದಂಬಾಡಿ ಬೂತ್ ಅಧ್ಯಕ್ಷೆ ವೀಣಾ ಆರ್‌ ರೈ ಬೆದ್ರಮಾರ್, ಸೀತಾರಾಮ ಗೌಡ ಇದ್ಯಪ್ಪೆ ,ಕೊರಗಪ್ಪ ಪೂಜಾರಿ ತಿಂಗಳಾಡಿ, ಕೃಷಿ ಪತ್ತಿನ ಸಹಕಾರಿ ಸಂಘ ಸದಸ್ಯರುಗಳಾದ ಸೂರ್ಯ ಪ್ರಸನ್ನ ರೈ ಎಂಡೆಸಾಗು, ಬಾಬು ಕೋರಂಗ ,ರೈತ ಮೋರ್ಚಾದ ಸದಸ್ಯ ಮಹಾಬಲ ರೈ ಕುಕ್ಕುಜೋಡು , ಕೆದಂಬಾಡಿ ಗ್ರಾ.ಪಂ. ಸದಸ್ಯರಾದ ಕೃಷ್ಣಕುಮಾರ್ ಇದ್ಯಪ್ಪೆ ,ಜಯಲಕ್ಷ್ಮಿ ಬಲ್ಲಾಳ್, ರೇವತಿ ಬಿ ,ವಿಟ್ಟಲ್ ರೈ ತಿಂಗಳಾಡಿ, ಪುಷ್ಪ ಎಂ ಬೋಲೋಡಿ ಉಪಸ್ಥಿತರಿದ್ದರು.

ಶರತ್ ಕುಮಾರ್ ಗುತ್ತು ಸ್ವಾಗತಿಸಿ ಕೊರಗಪ್ಪ ಪೂಜಾರಿ ತಿಂಗಳಾಡಿ ವಂದಿಸಿದರು.

LEAVE A REPLY

Please enter your comment!
Please enter your name here