ಕೆಎಸ್ಸಾರ್ಟಿಸಿ ಕಟ್ಟೆ ಪೂಜೆ ಸಮಿತಿಯಿಂದ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಅನ್ನಸಂತರ್ಪಣೆಗೆ ರೂ. 1ಲಕ್ಷ ರೂ ದೇಣಿಗೆ

0


ಪುತ್ತೂರು: ಕೆಎಸ್ಸಾರ್ಟಿಸಿ ಕಟ್ಟೆ ಪೂಜೆ ಸಮಿತಿಯಿಂದ ವರ್ಷಪ್ರಂತಿ ಸಂಸ್ಥೆಯ ಎದುರು ಜಾತ್ರೆಯ ಸಂದರ್ಭದಲ್ಲಿ ನಡೆಯುವ ಕಟ್ಟೆಪೂಜೆಯ ದಿನ ಸಾರ್ವಜನಿಕ ಅನ್ನಂತರ್ಪಣೆ ನೀಡುವ ಕುರಿತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ರೂ. 1 ಲಕ್ಷ ರೂ. ಸಮರ್ಪಣೆ ಮಾಡಲಾಯಿತು.


ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗದ ಅಧಿಕಾರಿ ಮತ್ತು ನೌಕರ ವೃಂದದವರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರಿಗೆ ದೇಣಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here