ಎಸ್‌ವೈಎಸ್ ಪುತ್ತೂರು ಝೋನ್ ಸಮಿತಿ ಅಸ್ತಿತ್ವಕ್ಕೆ ; ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಮಿಸ್ಬಾಹಿ, ಪ್ರ.ಕಾರ್ಯದರ್ಶಿಯಾಗಿ ಸ್ವಾಲಿಹ್ ಮುರ, ಕೋಶಾಧಿಕಾರಿಯಾಗಿ ಅಬೂಬಕ್ಕರ್ ನರಿಮೊಗರು ಆಯ್ಕೆ

0

ಪುತ್ತೂರು: ಸುನ್ನಿ ಯುವಜನ ಸಂಘ ಕರ್ನಾಟಕ ಇದರ ಪುತ್ತೂರು ಝೋನ್ ಸಮಿತಿಯ ರಚನೆ ಕಾವು ಬದ್ರಿಯ್ಯ ಎಜ್ಯು ಸೆಂಟರ್‌ನಲ್ಲಿ ಎಸ್‌ವೈಎಸ್ ಈಸ್ಟ್ ಜಿಲ್ಲಾಧ್ಯಕ್ಷ ಅಬೂಬಕರ್ ಸಅದಿ ಮಜೂರುರವರು ಅಧ್ಯಕ್ಷತೆಯಲ್ಲಿ ನಡೆಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಮಿಸ್ಬಾಹಿ, ಪ್ರ.ಕಾರ್ಯದರ್ಶಿಯಾಗಿ ಸ್ವಾಲಿಹ್ ಮುರ ಹಾಗೂ ಕೋಶಾಧಿಕಾರಿಯಾಗಿ ಅಬೂಬಕ್ಕರ್ ನರಿಮೊಗರು ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಸುಲೈಮಾನ್ ಸಅದಿ ಪಾಟ್ರಕೋಡಿ, ದಅವಾ ಕಾರ್ಯದರ್ಶಿಯಾಗಿ ಝುಬೈರ್ ಸಖಾಫಿ ಗಟ್ಟಮನೆ, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ಜಲೀಲ್ ಸಖಾಫಿ ಈಶ್ವರಮಂಗಲ, ಸೋಶಿಯಲ್ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ಕೊಯ್ಲ, ಸಾಂತ್ವನ ಕಾರ್ಯದರ್ಶಿಯಾಗಿ ಫವಾಝ್ ಮಾಡಾವು ಆಯ್ಕೆಯಾದರು.

ಸಮಿತಿ ಸದಸ್ಯರಾಗಿ ಹೈದರ್ ಸಖಾಫಿ ಬುಡೋಳಿ, ಶಾಫಿ ಮದನಿ ಮಾಡಾವು, ಸಿದ್ದೀಕ್ ಹಾಜಿ ಕಬಕ, ಫಾರೂಕ್ ಬನ್ನೂರು, ನೌಶಾದ್ ಸಅದಿ ಗಟ್ಟಮನೆ, ಅಬ್ದುಲ್ ಜಲೀಲ್ ಮುಸ್ಲಿಯಾರ್, ಅಬ್ದುಲ್ ಅಝೀಝ್ ಚೆನ್ನಾರ್, ರಫೀಕ್ ಬೀಟಿಗೆ, ಅಬ್ದುರ್ರಝಾಕ್ ಖಾಸಿಮಿ, ಅಬ್ದುಲ್ ಹಮೀದ್ ಕುಂಬ್ರ ಆಯ್ಕೆಯಾದರು.

LEAVE A REPLY

Please enter your comment!
Please enter your name here