ನದಿಯಲ್ಲಿ ಮುಳುಗಿ ಬಾಲಕನ ಸಾವು

0

ಉಪ್ಪಿನಂಗಡಿ: ನದಿಗೆ ಈಜಲೆಂದು ಹೋದ ಬಾಲಕರಿಬ್ಬರ ಪೈಕಿ ಓರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದಲ್ಲಿ ಮಾ.12ರಂದು ಸಂಜೆ ಸಂಭವಿಸಿದೆ.

ಮಾಣಿ ನಿವಾಸಿ ತ್ವಾಹಿರ್ ಎಂಬವರ ಪುತ್ರ ಮುಹಮ್ಮದ್ ಸಲ್ಮಾನ್ (16) ಮೃತ ಪಟ್ಟವರು. ಪೆರ್ನೆಯಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದ ಸಲ್ಮಾನ್ ಚಿಕ್ಕಮ್ಮನ ಮಗನೊಂದಿಗೆ ಬಿಳಿಯೂರಿನಲ್ಲಿ ನೇತ್ರಾವತಿ ನದಿಗೆ ನೂತನವಾಗಿ ನಿರ್ಮಾಣವಾಗುತ್ತಿರುವ ಅಣೆಕಟ್ಟು ಬಳಿ ಈಜಲೆಂದು ತೆರಳಿದ್ದರು.

ಈ ಸಂದರ್ಭ ಸಲ್ಮಾನ್‌ರವರು ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈತನ ಚಿಕ್ಕಮ್ಮನ ಮಗ ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here