ಶ್ರೀನಿಧಿ ಸೇವಾ ಟ್ರಸ್ಟ್‌ನಿಂದ ಆಹಾರ ಸಾಮಾಗ್ರಿ, ಧನಸಹಾಯ ವಿತರಣೆ

0

ಪುತ್ತೂರು: ಹೃದಯರೋಗ, ಕ್ಯಾನ್ಸರ್, ಕಿಡ್ನಿ ವೈಫಲ್ಯ ಬಾಧಿತ ನೊಂದವರ ಪಾಲಿಗೆ ನೆರವಾಗುತ್ತಿರುವ ಶ್ರೀ ನಿಧಿ ಸೇವಾ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಆಹಾರ ಸಾಮಗ್ರಿ ಮತ್ತು ಧನಸಹಾಯ ವಿತರಣಾ ಕಾರ್ಯಕ್ರಮ ಮಾ.12ರಂದು ಶ್ರೀ ಮಹಾಲಿಂಗೇಶ್ವರ ದೇವಾಲಯದ ನಟರಾಜ ವೇದಿಕೆಯಲ್ಲಿ ನಡೆಯಿತು.

ದ.ಕ.ಜಿಲ್ಲಾ ಬಾಲ ನ್ಯಾಯ ಮಂಡಳಿಯ ಜಡ್ಜ್ ಕಸ್ತೂರಿ ಬೊಳುವಾರು ಮತ್ತು ಬಿಎಸ್‌ಎನ್‌ಎಲ್‌ನ ನಿವೃತ್ತ ಉದ್ಯೋಗಿ ಮಂಜುನಾಥ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಕಸ್ತೂರಿ ಬೊಳುವಾರು, ಜನರ ಸೇವೆಯನ್ನು ಪರಮಾತ್ಮ ಶ್ರೀ ನಿಧಿ ಟ್ರಸ್ಟ್ ಮೂಲಕ ನಿಸ್ವಾರ್ಥಿ ಸೇವೆ ಮಾಡಿಸುತ್ತಿದ್ದಾರೆ. ಬಡ ರೋಗಿಗಳ ಸೇವೆ ದೇವರ ಕೆಲಸ, ಉತ್ತಮವಾಗಿ ಸಮಾಜದಲ್ಲಿ ಶ್ರಮಿಸುತ್ತೆ ಎಂದರು.

ಬಿಎಸ್‌ಎನ್‌ಎಲ್ ನಿವೃತ್ತ ಉದ್ಯೋಗಿ ಮಂಜುನಾಥರವರು ಮಾತನಾಡಿ, ಇನ್ನಷ್ಟು ಜನರ ಸಹಕಾರ ಈ ಸೇವೆಗೆ ನೀಡುವಂತೆ ಅಭಿನಂದಿಸಿದರು. ಗಣೇಶ್ ಮಾಡ್ನೂರು ಪ್ರಾರ್ಥಿಸಿದರು.

ರಶ್ಮಿ ವೀರಮಂಗಲ ಸ್ವಾಗತಿಸಿದರು. ಯಶ್ವಿತಾ ವಂದಿಸಿದರು. ಕೃಷ್ಣಪ್ಪ ಬಂಬಿಲ ಕಾರ್ಯಕ್ರಮ ನಿರೂಪಿಸಿದರು. ಅಂಬ್ಯುಲೆನ್ಸ್ ಚಾಲಕ ದಿನೇಶ್ ಕೆಯ್ಯೂರು ಹಾಗೂ ನಿಧಿ ಸೇವಾ ಟ್ರಸ್ಟ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here