ಶ್ರೀ ಕ್ಷೇತ್ರ ಕೆಯ್ಯೂರು ಶ್ರೀ ದೇವಿಯ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕೆಯ್ಯೂರು:  ಮಾ.21ರಿಂದ ಮಾ.28ರವರೆಗೆ ನಡೆಯುವ  ಕೆಯ್ಯೂರು ಗ್ರಾಮದ  ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಕೆಯ್ಯೂರಿನಲ್ಲಿ ಮಾ.21ರಿಂದ ಮಾ.28ರ ವರೆಗೆ ನಡೆಯುವ ಶ್ರೀ ದೇವಿಯ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ದೇವರಿಗೆ ಸಮರ್ಪಿಸಿ,  ದೇವಾಲಯ ಪ್ರಧಾನ ಆರ್ಚಕ ಶ್ರೀನಿವಾಸ ರಾವ್ ಮತ್ತು ಆನಂದ ಭಟ್ ಪೂಜೆ ಸಲ್ಲಿಸಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪಾನ ಸಮಿತಿ ಅಧ್ಯಕ್ಷ  ಶಶಿಧರ ರಾವ್ ಬೊಳಿಕಲ,  ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮಣ್ಣ ಗೌಡ ಮಾಡಾವು, ಬಾಬು ಪಾಟಾಳಿ ದೇರ್ಲ, ಪದ್ಮನಾಭ ಪಿ.ಎಸ್ ಪಲ್ಲತ್ತಡ್ಕ, ವಿಶ್ವನಾಥ ಶೆಟ್ಟಿ ಸಾಗು, ಈಶ್ವರೀ ಜೆ ರೈ ಸಂತೋಷ್ ನಗರ, ಕ್ಷೇತ್ರದ ಸಿಬ್ಬಂದಿಗಳಾದ ಜಯಕಾಂತ ಕೆಯ್ಯೂರು, ಕೃಷ್ಣ ಸಾಮಾನಿ ಕೆಯ್ಯೂರು, ಚಂದ್ರ ಮಾಡಾವು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here