ಮುಕ್ವೆ ಶಾಲೆಯ ಹಿರಿಯ ವಿದ್ಯಾರ್ಥಿ ದಿ.ಸುರೇಶ್‌ರವರ ಹುಟ್ಟುಹಬ್ಬದ ಪ್ರಯುಕ್ತ ಪುಸ್ತಕ ವಿತರಣೆ

0

ಪುತ್ತೂರು: ಮುಕ್ವೆ ಹಿ.ಪ್ರಾ. ಶಾಲೆಯ ಹಿರಿಯ ವಿದ್ಯಾರ್ಥಿ ದಿ.ಸುರೇಶ್‌ರವರ ಹುಟ್ಟುಹಬ್ಬದ ಸ್ಮರಣಾರ್ಥ 1 ರಿಂದ 8ನೇ ತರಗತಿಯ 32 ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು. ದಿ.ಸುರೇಶ್‌ರವರ ತಂದೆ ತಾಯಿ ಗುರುವಪ್ಪ ಮತ್ತು ಜಾನಕಿ ದಂಪತಿ, ಸಹೋದರ ನ್ಯಾಯವಾದಿಸುರೇಂದ್ರ, ಮುತ್ತಪ್ಪರವರು ಪುಸ್ತಕ ವಿತರಣೆ ಮಾಡಿದರು.

ಶಾಲೆಯ ಎಲ್ಲಾ ಮಕ್ಕಳಿಗೆ ಲಾಡು ಮತ್ತು ಪಾನೀಯವನ್ನು ವಿತರಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷ ತಾಹಿರಾ ಅಧ್ಯಕ್ಷತೆ ವಹಿಸಿ ಮಾತನಾಡಿ ಕೃತಜ್ಞತೆ ಸಲ್ಲಿಸಿದರು.

ಮುಖ್ಯಗುರು ಕಾರ್ಮೆಲಸ್ ಅಂದ್ರಾದೆ ಸ್ವಾಗತಿಸಿದರು. ಚರಣ್ ಕುಮಾರ್ ವಂದಿಸಿದರು. ವೇದಾವತಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಎಸ್‌ಡಿಎಂಸಿ ಸದಸ್ಯ ಕೃಷ್ಣಪ್ಪ ಪೂಜಾರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here