ರೂ.2 ಕೋಟಿ ಅನುದಾನದ ಕಾವು-ಅಂಬಟೆಮೂಲೆ ಸಂಪರ್ಕ ರಸ್ತೆಯ ಕಾಮಗಾರಿ ಆರಂಭ-ಸಂಚಾರ ಸ್ಥಗಿತ

0

ವರದಿ: ಸುನೀಲ್ ಕಾವು

ಕಾವು: ಶಾಸಕರ ಶಿಫಾರಸ್ಸಿನ ಮೂಲಕ ಲೋಕೋಪಯೋಗಿ ಇಲಾಖೆಯ ಸುಮಾರು 2 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಹೊಂದಲಿರುವ ಕಾವು-ಅಂಬಟೆಮೂಲೆ ಸಂಪರ್ಕ ರಸ್ತೆಯ ಕಾಮಗಾರಿಯು ಆರಂಭಗೊಂಡಿದ್ದು ಕೆಲವೆಡೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.

ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಡ್ನೂರು ಗ್ರಾಮದ ಕಾವು-ಅಂಬಟೆಮೂಲೆ ಸಂಪರ್ಕ ರಸ್ತೆಯ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ-ಮಾಣಿಯಡ್ಕ-ಬಾಳೆಕೊಚ್ಚಿ-ಅಂಬಟೆಮೂಲೆಯವರೆಗೆ ನಡೆಯಲಿರುವ ರಸ್ತೆ ಕಾಂಕ್ರೀಟೀಕರಣಕ್ಕೆ ಅಂಬಟೆಮೂಲೆಯಿಂದ ಚಾಲನೆ ನೀಡಲಾಗಿದೆ.

ಈಗಾಗಲೇ ರಸ್ತೆ ಕಾಂಕ್ರೀಟೀಕರಣಕ್ಕಾಗಿ ರಸ್ತೆ ಸಮತಟ್ಟು, ಜಲ್ಲಿ ಹಾಕುವ ಕೆಲಸ ಆರಂಭಗೊಂಡಿದ್ದು, ಆರಂಭದಲ್ಲಿ ಅಂಬಟೆಮೂಲೆಯಿಂದ ಬಾಳೆಕೊಚ್ಚಿ ಪಟ್ಟಾಜೆ ಕ್ರಾಸ್‌ವರೆಗಿನ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತ ಮಾಡಲಾಗಿದೆ. ಸಾರ್ವಜನಿಕರು, ವಾಹನ ಸವಾರರು ಸಹಕರಿಸುವಂತೆ ಲೋಕೋಪಯೋಗಿ ಇಂಜೀನಿಯರ್‌ರವರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here