ಸಾಲ್ಮರ ಮುದ್ದೋಡಿಯಲ್ಲಿ ವ್ಯಕ್ತಿ ಆತ್ಮಹತ್ಯೆ

0

ಪುತ್ತೂರು: ಸಾಲ್ಮರ ಮುದ್ದೋಡಿ ನಿವಾಸಿ ವಿಜಯ ರೈ (60ವ) ಎಂಬವರು ಮಾ.17 ರ ಸಂಜೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ.

ವಿಜಯ ರೈ ಅವರು ಅನಾರೋಗ್ಯದಿಂದಿದ್ದು ಸಂಜೆ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದರು. ಇದೇ ವೇಳೆ ಅವರ ಪತ್ನಿ ಬಂದು ಅಸ್ವಸ್ಥಗೊಂಡ ಗಂಡನನ್ನು ನೋಡಿ ಬೊಬ್ಬೆ ಹೊಡೆದರು. ತಕ್ಷಣ ಮನೆ ಮಂದಿ ವಿಜಯ ರೈ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದರಾದರೂ ಆ ವೇಳೆಗಾಗಲೇ ವಿಜಯ ರೈ ಮೃತಪಟ್ಟಿದ್ದರು.

ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here