ನಾಳೆ(ಮಾ.19) ಆರ್ಲಪದವಿನಲ್ಲಿ ತ್ರಿಶಕ್ತೀ ಪರಿಣಯ ಯಕ್ಷಗಾನ ಬಯಲಾಟ.

0

ನಿಡ್ಪಳ್ಳಿ; ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ, ಹಳೆಯಂಗಡಿ ಇವರಿಂದ ಜಗದ್ಗುರು ಶಂಕರಾಚಾರ್ಯ ಶ್ರೀ ಎಡನೀರು ಮಠಾದೀಶರಾದ ಸಚ್ಚಿದಾನಂದ ಭಾರತೀ ಮಹಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಮಾ.19 ರಂದು ಸಂಜೆ ಗಂಟೆ 6.30 ರಿಂದ ಪಾಣಾಜೆ ಆರ್ಲಪದವು ದೈವಸ್ಥಾನದ ವಠಾರದಲ್ಲಿ ಜಯಲಕ್ಷ್ಮಿ ಸತ್ಯನಾರಾಯಣ ಅಡಿಗರವರ ವಿವಾಹದ ರಜತ ಸಂಭ್ರಮಾಚರಣೆಯ ಪ್ರಯುಕ್ತ “ತ್ರಿಶಕ್ತೀ ಪರಿಣಯ” ( ಉಮಾ ಲಕ್ಷ್ಮೀ ಸರಸ್ವತಿ) ಎಂಬ ಪುಣ್ಯ ಕಥಾಭಾಗವನ್ನು ಆಡಿ ತೋರಿಸಲಿರುವರು.

ಸನ್ಮಾನ ಕಾರ್ಯಕ್ರಮ – ಶ್ರೀ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಕೃಷ್ಣ ಬೋಳಿಲ್ಲಾಯ ಹಾಗೂ ಸದ್ರಿ ಮೇಳದ ಸಂಚಾಲಕರಾದ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ ಇವರಿಗೆ ಗೌರವ ಸನ್ಮಾನ ಸ್ವೀಕರಿಸಲಿರುವರು. ಅಲ್ಲದೆ ರಾತ್ರಿ ಗಂಟೆ 8. 30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಸತ್ಯನಾರಾಯಣ ಅಡಿಗ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here