ಇಂದು ಪಡುಮಲೆ ಜುಮಾ ಮಸೀದಿ ಆಂಡ್ ನೇರ್ಚೆ ಸಮಾರೋಪ ಸಮಾರಂಭ

0


ಪುತ್ತೂರು: ಪಡುಮಲೆ ಜುಮಾ ಮಸೀದಿ (ಪಮ್ಮಲ) ವಠಾರದಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಮಹಾನುಭಾವರ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಆಂಡ್‌ನೇರ್ಚೆ, ಕೂಟು ಪ್ರಾರ್ಥನೆ ಮತ್ತು ಧಾರ್ಮಿಕ ಉಪನ್ಯಾಸದ ಸಮಾರೋಪ ಸಮಾರಂಭ ಇಂದು (ಮಾ. 19) ರಂದು ನಡೆಯಲಿದೆ.

ಕೂರ್ಟು ಪ್ರಾರ್ಥನೆಯು ಸಯ್ಯದ್ ರಶೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ನೇತೃತ್ವದಲ್ಲಿ ನಡೆಯಲಿದೆ. ಇಪಿ ಅಬೂಬಕ್ಕರ್ ಖಾಸಿಮಿ ಪತ್ತನಾಪುರಂ ಮುಖ್ಯ ಭಾಷಣ ಮಾಡಲಿದ್ದು, ಸಮಾರಂಭವನ್ನು ಪಮ್ಮಲ ಖತೀಬ್ ಶಂಸುದ್ದೀನ್ ದಾರಿಮಿ ಉದ್ಘಾಟಿಸಲಿದ್ದು ಜಮಾತ್ ಕಮಿಟಿ ಅಧ್ಯಕ್ಷರಾದ ಮಹಮ್ಮದ್ ಹಾಜಿ ಬಡಗನ್ನೂರು ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆ 4 ಗಂಟೆಗೆ ಸೌಹಾರ್ಧ ಸಂಗಮ ನಡೆಯಲಿದ್ದು ಮಾಜಿ ಸಚಿವ ರಮಾನಾಥ ರಐ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ ಕೆ ಹರಿಪ್ರಸಾದ್, ಶಾಸಕ ಯು ಟಿ ಖಾದರ್, ಡಿಸಿಸಿ ಅಧ್ಯಕ್ಷ ಹರೀಶ್‌ಕುಮಾರ್, ಎಂಎಲ್ಸಿ ಮಂಜುನಾಥ ಭಂಡಾರಿ, ಮಾಜಿ ಶಾಸಕಿ ಶಕುಂಥಳಾ ಶೆಟ್ಟಿ, ಅಶೋಕ್‌ಕುಮಾರ್ ರೈ ಕೋಡಿಂಬಾಡಿ, ಬಡಗನ್ನೂರು ಗ್ರಾಪಂ ಅಧ್ಯಕ್ಷೆ ಶ್ರೀಮತಿ, ಕಾವು ಹೇಮನಾಥ ಶೆಟ್ಟಿ, ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಎಂ ಎಸ್ ಮಹಮ್ಮದ್, ಎಂ ಬಿ ವಿಶ್ವನಾಥ ರೈ, ಬಾಲಕೃಷ್ಣ ರೈ ಕುದ್ಕಾಡಿ, ಕಂಬಳ ಸಮಿತಿಯ ಅಧ್ಯಕ್ಷ ಚಂಧ್ರಹಾಸ ಶೆಟ್ಟಿ ಸೇರಿದಂತೆ ಅನೇಕ ಮಂದಿ ರಾಜಕೀಯ, ಸಮಾಜಿಕ ಹಾಗೂ ಧಾರ್ಮಿಕ ನೇತಾರರು ಭಾಘವಹಿಸಲಿದ್ದಾರೆ ಎಂದು ಜಮಾತ್ ಕಮಿಟಿ ಅಧ್ಯಕ್ಷರಾದ ಮಹಮ್ಮದ್ ಬಡಗನ್ನೂರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here