ನಿಡ್ಪಳ್ಳಿ; ಒಕ್ಕೂಟದ ತ್ರೈಮಾಸಿಕ ಸಭೆ- ಆಮಂತ್ರಣ ಪತ್ರ ಬಿಡುಗಡೆ

0

ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ನಿಡ್ಪಳ್ಳಿ ಒಕ್ಕೂಟದ ತ್ರೈಮಾಸಿಕ ಸಭೆ ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ ಪಾಟಾಳಿಯವರ ಅಧ್ಯಕ್ಷತೆಯಲ್ಲಿ ಮಾ.19 ರಂದು ನಿಡ್ಪಳ್ಳಿ ಶಾಲೆಯಲ್ಲಿ ನಡೆಯಿತು.

      ಬೆಟ್ಟಂಪಾಡಿ ವಲಯ ಮೆಲ್ವೀಚಾರಕ ಶಿವಪ್ಪ .ಬಿ ಮಾತನಾಡಿ ಯೋಜನೆಯ ಉತ್ತಮ ಕಾರ್ಯಕ್ರಮ ಸಂಪೂರ್ಣ

  ಸುರಕ್ಷೆಯ ಬಗ್ಗೆ ಮಾಹಿತಿ ನೀಡಿ ಎಲ್ಲರೂ ತಮ್ಮ ಹೆಸರು ನೊಂದಾಯಿಸುವಂತೆ ತಿಳಿಸಿದರು. ಅಲ್ಲದೆ ಮುಂದೆ ಸಾಲ ನೀಡುವ ನಿಯಮದಲ್ಲಿ ಆಗಲಿರುವ ಬದಲಾವಣೆ ಬಗ್ಗೆಯೂ  ಮಾಹಿತಿ ನೀಡಿ ಸಾಲದ ಕಂತು ಬಾಕಿಯಾಗದಂತೆ ನೋಡಿ ಕೊಳ್ಳಲು ತಿಳಿಸಿದರು.

       ಸೇವಾ ಪ್ರತಿನಿಧಿ ಜಗನ್ನಾಥ ಪಾಟಾಳಿ ಮಾತನಾಡಿದರು. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಮಂಜುನಾಥ ರೈ ಪೂಜೆಯ ಪೂರ್ವ ತಯಾರಿ ಬಗ್ಗೆ ಮಾತನಾಡಿದರು.  ಒಕ್ಕೂಟದ ಉಪಾಧ್ಯಕ್ಷ ಸತೀಶ್ ನಾಯ್ಕ,ವಿಪತ್ತು ನಿರ್ವಹಣಾ ತಂಡದ ಸೀತಾರಾಮ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಟ್ಟಂಪಾಡಿ ಸೇವಾ ಪ್ರತಿನಿಧಿ ಶಾಲಿನಿ.ಕೆ ಮಂಜುನಾಥ ದೇವರ ಫೋಟೊ ಮತ್ತು ಒಂದು ದೀಪವನ್ನು ಒಕ್ಕೂಟಕ್ಕೆ ಕೊಡುಗೆಯಾಗಿ ನೀಡಿದರು.

     ಮಂಜುನಾಥ ರೈ.ಕೆ ಸ್ವಾಗತಿಸಿ, ಹರಿಪ್ರಸಾದ್.ಸಿ.ಎಚ್ ಹಾಗೂ ಸವಿತಾ ತಮ್ಮ ತಂಡದ ವರದಿ ವಾಚಿಸಿದರು. ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಒಕ್ಕೂಟದ ವರದಿ ವಾಚಿಸಿದರು.ಒಕ್ಕೂಟದ ಜತೆ ಕಾರ್ಯದರ್ಶಿ ಹೇಮಾವತಿ ಸಿ.ಎಚ್ ವಂದಿಸಿದರು.

   ಆಮಂತ್ರಣ ಪತ್ರ ಬಿಡುಗಡೆ- ನಿಡ್ಪಳ್ಳಿ ಶ್ರೀ ಶಾಂತದುರ್ಗಾ ದೇವಸ್ಥಾನದಲ್ಲಿ ಬರುವ ಏ.9 ರಂದು ನಡೆಯಲಿರುವ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಆಮಂತ್ರಣ ಪತ್ರವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

LEAVE A REPLY

Please enter your comment!
Please enter your name here