ಇಡ್ಕಿದು:ಸಾಲದ ಬಾಧೆಯಿಂದ ಕೃಷಿಕನ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ರೈತ ಸಂಘ ಆಗ್ರಹ

0

ಪುತ್ತೂರು:ಇಡ್ಕಿದು ಗ್ರಾಮದ ಬಂಗೇರಕೋಡಿ ನಿವಾಸಿ ಕೃಷಿಕ ವೀರಪ್ಪ ಗೌಡ ಅವರು ಸೊಸೈಟಿಯ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.


ಮಾ.19ರಂದು ಕರ್ನಾಟಕ ರಾಜ್ಯ ರೈತ ಸಂಘದ ನಿಯೋಗ ಮೃತ ವೀರಪ್ಪ ಗೌಡ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದೆ.ಈ ಸಂದರ್ಭ ವೀರಪ್ಪ ಗೌಡರ ಆತ್ಮಹತ್ಯೆಗೆ ಕಾರಣರಾದವರ ಕುರಿತು ಕ್ರಮ ಕೈಗೊಳ್ಳುವಂತೆ ಆಮ್ ಆದ್ಮಿ ಪಕ್ಷದ ಪುರುಷೋತ್ತಮ ಕೋಲ್ಪೆ ಅವರು ರಾಜ್ಯ ರೈತ ಸಂಘಕ್ಕೆ ಮನವಿ ಮಾಡಿದರು.ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ್ ಅವರು ಮಾತನಾಡಿ ಬ್ಯಾಂಕ್‌ನವರ ಒತ್ತಡಕ್ಕೆ ಇಲ್ಲಿ ಆತ್ಮಹತ್ಯೆ ನಡೆದಿದೆ.ಇದರ ಸಮಗ್ರ ತನಿಖೆ ಆಗಬೇಕೆಂದರು.ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಕಾರ್ಯದರ್ಶಿ ಸನ್ನಿ ಡಿಸೋಜಾ., ಜಿಲ್ಲಾ ಗೌರವಾಧ್ಯಕ್ಷ ಹರ್ಷ ಕುಮಾರ್ ಹೆಗಡೆ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಖಲೀಲ್, ಜಿಲ್ಲಾ ಮುಖಂಡ ಸ್ಟೀವನ್ ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here