ಕುಂಬ್ರ ಶ್ರೀ ರಾಮ ಭಜನಾ ಮಂದಿರದ 41 ನೇ ವಾರ್ಷಿಕೋತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಕುಂಬ್ರ ಶ್ರೀ ರಾಮ ಭಜನಾ ಮಂದಿರ ಇದರ 41 ನೇ ವರ್ಷದ ವಾರ್ಷಿಕ ಮಂಗಲೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರ ಯಕ್ಷಗಾನ ಬಯಲಾಟ ಎ.10 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಮಾ.19 ರಂದು ಶ್ರೀ ದೇವರಲ್ಲಿ ಪ್ರಾರ್ಥಿಸಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ರೈ ಅರೆಪ್ಪಾಡಿ,ಕೋಶಾಧಿಕಾರಿ ಚಂದ್ರಕಾಂತ ಶಾಂತಿವನ,ಉಪಾಧ್ಯಕ್ಷ ಮೋನಪ್ಪ ಪೂಜಾರಿ ಬಡೆಕ್ಕೋಡಿ,ಜೊತೆ ಕಾರ್ಯದರ್ಶಿ ಆಶಾಲತಾ ರೈ ಕುಂಬ್ರ, ಮಾಜಿ ಅಧ್ಯಕ್ಷರುಗಳಾದ ಬಾಬು ಪೂಜಾರಿ ಬಡೆಕ್ಕೋಡಿ, ಕುಂಬ್ರ ದುರ್ಗಾಪ್ರಸಾದ್ ರೈ,ಕರುಣಾ ರೈ ಬಿಜಳ ಹಾಗೂ ಪ್ರಮುಖರುಗಳಾದ ಪುರಂದರ ರೈ ಕುಯ್ಯಾರು,ಪುರಂದರ ಶೆಟ್ಟಿ ಮುಡಾಲ,ಮಾಧವ ರೈ ಕುಂಬ್ರ, ರಾಜ್ ಪ್ರಕಾಶ್ ರೈ ಕುಂಬ್ರ, ಚಂದ್ರಶೇಖರ ರೈ ಕುರಿಕ್ಕಾರ, ಚಿರಾಗ್ ರೈ ಬೆದ್ರುಮಾರ್, ಅಂಕಿತ್ ರೈ ಕುಯ್ಯಾರು, ಮೇಘರಾಜ್ ರೈ ಮುಡಾಲ, ಆದರ್ಶ ಶೆಟ್ಟಿ ನೀರಳ ದೀಕ್ಷಿತ್ ರೈ ಮುಡಾಲ ಮತ್ತು ಅಶೋಕ ಪೂಜಾರಿ ಬಡೆಕ್ಕೋಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here