ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ  ಮಾತೃಪೂಜನ ಕಾರ್ಯಕ್ರಮ, ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣೆ

0

ಅನ್ನದ ಋಣವನ್ನು, ಆನಂದದ ಕ್ಷಣವನ್ನು ನಾವೂ ಎಂದಿಗೂ ಮರೆಯಬಾರದು: ಒಡಿಯೂರು ಶ್ರೀ

ವಿಟ್ಲ: ನಾವೆಲ್ಲಾ ವಿಶೇಷವಾದ ಸಂಭ್ರಮದಲ್ಲಿದ್ದೇವೆ. ಇದೊಂದು ಸಂತೋಷದ ಕ್ಷಣವೂ ಹೌದು. ಮರೆತು ಹೋದ ವಿಚಾರಗಳನ್ನು ಮತ್ತೆ ನೆನಪಿಸುವ ಕಾರ್ಯ ಮಾಡುವುದಾಗಿದೆ. ಒಂದು ಕಡೆ ಮಾತೃಪೂಜನ ಕಾರ್ಯಕ್ರಮ ಆದರೆ ಇನ್ನೊಂದೆಡೆ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣೆ. ನಮ್ಮ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಅನ್ನ ಮತ್ತು ಅಮ್ಮ ಎರಡು ಅಕ್ಷರಗಳಿಗೂ ಸಂಬಂಧವಿದೆ. ಅನ್ನದಿಂದಲೇ ಕೋಶಗಳು ಜಾಗೃತವಾಗುವುದು. ಅನ್ನದ ಋಣವನ್ನು, ಆನಂದದ ಕ್ಷಣವನ್ನು ನಾವು ಮರೆಯಬಾರದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು. 

ಅವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವತಿಯಿಂದ ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ನಡೆದ ಮಾತೃಪೂಜನ ಕಾರ್ಯಕ್ರಮ ಹಾಗೂ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣೆಯ ಸಂದರ್ಭದಲ್ಲಿ ಆಶೀರ್ವಚನ ನೀಡಿದರು.

 ನಾವು ಶಾಲೆಯ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಗಳಿಸಲು ಪ್ರಯತ್ನಿಸಿದರೆ ಸಾಲದು, ಜೀವನದಲ್ಲಿ ನೂರಕ್ಕೆ ನೂರು ಯಶಸ್ಸು ಪಡೆಯುವವರಾಗಬೇಕು. ಅದಕ್ಕೆ ಪೂರಕವೆಂಬಂತೆ ಇಂತಹ ಕಾರ್ಯಗಳ ಮೂಲಕ ಸಂಸ್ಕಾರವನ್ನು ಬೆಳೆಸಬೇಕು. ಶಾಲೆಗಳಲ್ಲಿ ಪಾಠ ಮೊದಲು ಪರೀಕ್ಷೆ ಕೊನೆಗೆ. ಆದರೆ ಜೀವನದಲ್ಲಿ ಪರೀಕ್ಷೆ ಮೊದಲು ಪಾಠ ನಂತರ. ಸಮಾಜದಲ್ಲಿ ಇತ್ತೀಚೆಗೆ ನಡೆಯುವ ಅನೇಕ ದುಷ್ಕೃತ್ಯಗಳಿಗೆ ಸಂಸ್ಕಾರದ ಕೊರತೆಯೇ ಕಾರಣ. ಸಂಸ್ಕೃತಿಯನ್ನು ಉಳಿಸುವಲ್ಲಿ ಪೋಷಕರ ಪಾತ್ರದ ಬಗ್ಗೆ ಅರಿವಿರಬೇಕು. ನಾವೆಲ್ಲರೂ ಒಂದೊಂದು ದೀಪಗಳು. ದೀಪಕ್ಕೆ ಸಂಸ್ಕಾರ ಸಿಕ್ಕಿದಾಗ ನಿರಂತರ ಉರಿಯುವುದಕ್ಕೆ ಸಾಧ್ಯ. ನಮ್ಮ ಅಂತರಂಗದ ಜ್ಯೋತಿ ಬೆಳಗಲು ಜೀವನ ಸಂಸ್ಕಾರ ಬಹುಮುಖ್ಯ. ಆಗ ಸಮಾಜವು ಬೆಳೆಯುತ್ತದೆ, ಬೆಳಗುತ್ತದೆ. ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಕೊಳ್ಳೋಣ ಎಂದರು.

ಕಾರ್ಯಕ್ರಮವನ್ನು ಸಾಧ್ವಿ ಶ್ರೀ  ಮಾತಾನಂದಮಯೀರವರು ದೀಪಬೆಳಗಿಸಿ ಉದ್ಘಾಟಿಸಿ ಮಾತೃಪೂಜನ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.  

ವೇ|ಮೂ| ಶುಕ್ಲಶ್ಯಾಮ ಭಟ್ ಹಾಗೂ ವೇ|ಮೂ| ನವರಾಜ ಭಟ್ ಅಮೈ ಮಾತೃಪೂಜನ ಕಾರ್ಯಕ್ರಮದ ವಿಧಿ-ನಿಧಾನ ನಡೆಸಿಕೊಟ್ಟರು.  ಶಾಲಾ ಮುಖ್ಯೋಪಾಧ್ಯಾಯಿನಿ  ರೇಣುಕಾ ಎಸ್.ರೈ ಉಪಸ್ಥಿತರಿದ್ದರು. ವಿದ್ಯಾರ್ಥಿಗಳೆಲ್ಲರೂ ಹಣತೆಗಳನ್ನು ಉರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದರು. 

ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.  ಮಾತೃಮಂಡಳಿ ಸಂಚಾಲಕಿ  ವಿದ್ಯಾಲಕ್ಷ್ಮೀ ಸ್ವಾಗತಿಸಿ, ಶಾಲಾ ಸಂಚಾಲಕ ಗಣಪತಿ ಭಟ್ ಸೇರಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. 

ಮಾತೃಮಂಡಳಿಯ ಸದಸ್ಯೆ  ಹರಿಣಾಕ್ಷಿ ಪಕಳ ವಂದಿಸಿ, ಶಾಲಾ ಶಿಕ್ಷಕ  ಶೇಖರ ಶೆಟ್ಟಿ ಬಾಯಾರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here