ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನಾ ಸಮಿತಿಯ ಸಭೆ

0

ಪುತ್ತೂರು: ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನಾ ಸಮಿತಿಯ ಸಭೆಯು ಮಾ.25 ರಂದು ಸಂಜೆ ದರ್ಬೆ ಸಮಿತಿಯ ಜೊತೆ ಕಾರ್ಯದರ್ಶಿ ನಿತಿನ್ ಪಕ್ಕಳರವರ ಗೃಹ ಗುಲಾಬಿ ಸದನದಲ್ಲಿ ಸಮಿತಿ ಅಧ್ಯಕ್ಷ ಎ.ಜಗಜ್ಜೀವನ್ ದಾಸ್ ರವರ ಅಧ್ಯಕ್ಷತೆಯಲ್ಲಿ ಜರಗಿತು.


ಸಭೆಯಲ್ಲಿ ಮಾತನಾಡಿದ ಬಿರುಮಲೆ ಅಭಿವೃದ್ಧಿ ಯೋಜನಾ ಸಮಿತಿಯ ಅಧ್ಯಕ್ಷ ಎ.ಜಗಜ್ಜೀವನ್ ದಾಸ್ ರವರು ಸ್ವಾಗತಿಸಿ ಮಾತನಾಡಿ, ಬಿರುಮಲೆ ಬೆಟ್ಟದಲ್ಲಿ ಚಾಲ್ತಿಯಲ್ಲಿರುವ ಅಭಿವೃದ್ಧಿ ಕಾರ್ಯಗಳು, ಶೀಘ್ರದಲ್ಲಿಯೇ ನಡೆಸಲಾಗುವ ಸಭಾಂಗಣದ ನವೀಕರಣದ ಕಾರ್ಯ ಅಲ್ಲದೆ ಇತರ ಕಾರ್ಯಗಳ ಬಗ್ಗೆ ಸೂಚಿಸಿ ಸರ್ವರ ಸಹಕಾರ ಕೋರಿದರು.


ಸಭೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಪ್ರೊ|ಎ.ವಿ ನಾರಾಯಣ, ಜೊತೆ ಕಾರ್ಯದರ್ಶಿ ನಿತಿನ್ ಪಕ್ಕಳ, ಉಪಾಧ್ಯಕ್ಷ ಎನ್.ಜಯಪ್ರಕಾಶ್ ರೈ, ಕೋಶಾಧಿಕಾರಿ ಪ್ರೊ|ದತ್ತಾತ್ರೇಯ ರಾವ್, ಸದಸ್ಯರಾದ ಮನೋಜ್ ಶಾಸ್ತ್ರೀ, ಡಾ.ಸತ್ಯವತಿ ಆಳ್ವ, ಡಾ.ರವೀಂದ್ರ, ಶಾಂತ ಕುಮಾರ್, ಸೂರ್ಯನಾಥ ಆಳ್ವ ಉಪಸ್ಥಿತರಿದ್ದರು. ಕಾರ್ಯದರ್ಶಿ ಸುಬ್ರಾಯ ಅಮ್ಮಣ್ಣಾಯ ವಂದಿಸಿದರು.

LEAVE A REPLY

Please enter your comment!
Please enter your name here