ಪುತ್ತೂರು ನರಸಿಂಹ ನಾಯಕ್ ಅವರಿಗೆ ಸಂತ ಶಿಶುನಾಳ ಶರೀಫ ಪ್ರಶಸ್ತಿ

0

ಪುತ್ತೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಿಂದ ನೀಡುವ 2020-21 ನೇ ಸಾಲಿನ ಸಂತ ಶಿಶುನಾಳ ಶರೀಫ ಪ್ರಶಸ್ತಿಗೆ ಖ್ಯಾತ ಗಾಯಕರು ಸಂಗೀತ ನಿರ್ದೇಶಕರೂ ಆಗಿರುವ ಪುತ್ತೂರು ನರಸಿಂಹ ನಾಯಕ್ ಅವರು ಆಯ್ಕೆಯಾಗಿದ್ದಾರೆ.

ಕಳೆದ ಸುಮಾರು 45 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ 10,000 ಕ್ಕೂ ಅಧಿಕ ಭಕ್ತಿಗೀತೆಗಳನ್ನು ಹಾಡಿರುವ ಹಾಗೂ ಪ್ರಪಂಚದಾದ್ಯಂತ 6000 ಕ್ಕೂ ಅಧಿಕ ಸಂಗೀತ ಕಚೇರಿಗಳನ್ನು ನೀಡಿ ಕನ್ನಡದ ಕಂಪನ್ನು ಪಸರಿಸಿದ ಗೌರವ ಇವರಿಗೆ ಸಲ್ಲುತ್ತದೆ.

ಅಲ್ಲದೇ ದಾಸರ ಪದಗಳ 108 ಧ್ವನಿ ಸುರುಳಿಗಳ ಸರಣಿ ಮಾಲಿಕೆ ಸೇರಿದಂತೆ ವಿವಿಧ ದೇವಾಲಯಗಳ ಇತಿಹಾಸ ವೈಭವ ಕೊಂಡಾಡುವ 500 ಕ್ಕೂ ಹೆಚ್ಚು ಭಕ್ತಿ ಗೀತೆಗಳ ಧ್ವನಿ ಸುರುಳಿಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ.

ಸಂಗೀತ ಕ್ಷೇತ್ರಕ್ಕೆ ಇವರು ನೀಡಿದ ಅಮೂಲ್ಯ ಸೇವೆಗಾಗಿ ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-2005, ಕರ್ನಾಟಕ ಸಂಗೀತ ನಾಟ್ಯ ಅಕಾಡೆಮಿಯ ಜೀವಮಾನ ಸಾಧನಾ ಪ್ರಶಸ್ತಿ-2006, ಕರ್ನಾಟಕ ಚಲನಚಿತ್ರ ಮಂಡಳಿಯಿಂದ ಉತ್ತಮ ಗಾಯಕ ಪ್ರಶಸ್ತಿ -1998 ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರ ಮುಡಿಯೇರಿದೆ.

LEAVE A REPLY

Please enter your comment!
Please enter your name here