ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ರಚನಾ. ವಿ ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್

0

ಕಾಣಿಯೂರು : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು 2022-23 ರಲ್ಲಿ ನಡೆಸಿದ ಸೀನಿಯರ್ ಗ್ರೇಡ್ ಭರತನಾಟ್ಯ ಪರೀಕ್ಷೆಯಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮದ 10ನೇ ತರಗತಿ ವಿದ್ಯಾರ್ಥಿನಿ ರಚನಾ ವಿ ಡಿಸ್ಟಿಂಕ್ಷನ್ ಪಡೆದುಕೊಂಡಿರುತ್ತಾರೆ .

ಸುಳ್ಯದ ಗಾನ ನೃತ್ಯ ಅಕಾಡೆಮಿಯ ಗುರು ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಅವರ ಶಿಷ್ಯೆಯಾಗಿರುವ ಇವರು ಸುಳ್ಯ ತಾಲೂಕಿನ ಕಲ್ಮಡ್ಕದ ಓಣಿಯಡ್ಕ ರಾಧಾಕೃಷ್ಣ ಮತ್ತು ರೇಖಾ ದಂಪತಿಗಳ ಪುತ್ರಿ. ನೃತ್ಯ, ಸಂಗೀತ,ಅಭಿನಯ ,ಕ್ರಾಫ್ಟ್, ಕಲಿಕೆಯಲ್ಲೂ ಆಸಕ್ತಿ ಇರುವ ಈಕೆ ಸಂಸ್ಥೆಯ ವಿದ್ಯಾರ್ಥಿನಿ.

LEAVE A REPLY

Please enter your comment!
Please enter your name here