ಪರಿವಾರ ಬಂಟರ ಸಂಘದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ- ಸಂಘದ ಪುತ್ತೂರು ವಲಯದ ಮಹಾಸಭೆ ,ಸನ್ಮಾನ

0

ಪುತ್ತೂರು: ಪರಿವಾರ ಬಂಟರ ಸಂಘ ಮಂಗಳೂರು ಇದರ ಪುತ್ತೂರು ವಲಯದ ವತಿಯಿಂದ ಮಾ.26ರ ಬೆಳಿಗ್ಗೆ 21ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಪುತ್ತೂರು ವಲಯದ ಸರ್ವ ಸದಸ್ಯರ ಸಭೆ ,ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಪುತ್ತೂರು ಕಲ್ಲಾರೆ ಶ್ರೀ ಗುರು ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಿವೃತ್ತ ಎ ಎಸ್ ಐ ಗೋಪಾಲ್ ನಾಯಕ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಸಂತೋಷ್ ಕುಮಾರ್ ಎ. ಉಪಾಧ್ಯಕ್ಷರಾದ ಮನೋಹರ್ ಕೊಳಕ್ಕಿಮಾರ್, ಮಹಿಳಾ ವೇದಿಕೆಯ ಅಧ್ಯಕ್ಷೆ ಶಕಿಲಾ ಉಪಸ್ಥಿತರಿದ್ದರು

ಸಂಘದ ಪದಾಧಿಕಾರಿಗಳು ಸರ್ವ ಸದಸ್ಯರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು, ಬಳಿಕ ಅನ್ನ ಸಂತರ್ಪಣೆ ನಡೆಯಿತು.

ಸನ್ಮಾನ :
ಸಮಾರಂಭದಲ್ಲಿ ಪರಿವಾರ ಬಂಟ ಸಮಾಜದಲ್ಲಿ ಧಾರ್ಮಿಕ ,ಸಾಮಾಜಿಕ ,ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಸಮಾಜ ಬಾಂಧವರನ್ನು ಸನ್ಮಾನಿಸಲಾಯಿತು ಕೊಂಬೆಟ್ಟು ನಿವಾಸಿ ಉದಯಶಂಕರ್ ನಾಯಕ್ ಮತ್ತು ಉಮಾ ದಂಪತಿಯ ಪುತ್ರ ತೇಜಸ್ ನಾಯಕ್, ಆನಾಜೆ ಚಂದ್ರಶೇಖರ್ ನಾಯಕ್ ರವರ ಪುತ್ರ ಶ್ರೇಯಸ್ , ಮಂಜಲ್ಪಡ್ಪು ರವಿ ಸಂಪತ್ ನಾಯಕ್ ಮತ್ತು ಕ್ಷಮಿತಾ ದಂಪತಿಯ ಪುತ್ರ ನಂದನ್, ಪರ್ಲಡ್ಕ ರಾಕೇಶ್ ಕುಮಾರ್ ಮತ್ತು ಜ್ಯೋತಿ ದಂಪತಿಯ ಪುತ್ರ ಮಹಿನ್, ಉಮೇಶ್ ನಾಯಕ್ ಇವರ ಪುತ್ರ ಉಜ್ವಲ್ ನಾಯಕ್ ಪಾರ್ಲಡಕ ಸತೀಶ್ ನಾಯಕ್ ಮತ್ತು ನೈನಾ ದಂಪತಿಯ ಪುತ್ರರಾದ ಹೃದಯ್ ನಾಯಕ್ ಮತ್ತು ಹಾರ್ದಿಕ್ ನಾಯಕ್ ರನ್ನು ಸನ್ಮಾನಿಸಲಾಯಿತು.

ಹೇಮಲತಾ ನಾಯಕ್, ವನಿತಾ ನಾಯಕ್, ಸುಪ್ರಭಾ ನಾಯಾಕ್ ಪ್ರಾರ್ಥಿಸಿದರು, ಕವನ್ ನಾಯಕ್ ಸ್ವಾಗತಿಸಿದರು, ಯುವ ಪರಿವಾರ ಬಂಟರ ವೇದಿಕೆಯ ಅಧ್ಯಕ್ಷ ಅಭಿಜಿತ್ ನಾಯಕ್ ಕೊಳಕ್ಕಿಮಾರು ವಂದಿಸಿದರು, ಸಂಘದ ಕಾರ್ಯದರ್ಶಿ ಕೆ.ಪಿ ಸುಧಾಕರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು

LEAVE A REPLY

Please enter your comment!
Please enter your name here